ವಿಟ್ಲ: ಕಳೆದ ಕೆಲವು ದಿನಗಳ ಹಿಂದೆ ಪುತ್ತೂರು ಶಾಸಕರಾದ ಸಂಜೀವ ಮಠಂದೂರು ರವರು ಮಾಣಿಲ ಗ್ರಾಮದ ಬೇಟಿಯ ಸಂದರ್ಭದಲ್ಲಿ ಕಡು ಬಡತನದಲ್ಲಿರುವ ಹಾಗೂ ಆ ಮನೆಯ ವ್ಯಕ್ತಿ ದಿವ್ಯಾಂಗ ಹಾಗೂ ರೋಗ ಗ್ರಸ್ತನಾಗಿ ಮಲಗಿದ್ದಲ್ಲೇ ಇರುವ ಮನೆಗೆ ಬೇಟಿ ನೀಡಿದಾಗ ಆ ಮನೆಯ ಪರಿಸ್ಥಿತಿ ಕಂಡು ಮರುಗಿ ತಕ್ಷಣ ಸೋಲಾರ್ ಲೈಟ್ ಅಳವಡಿಸುವ ಭರವಸೆ ನೀಡಿದ್ದರು .ಅಂತೆ ಇಂದು ೨೦ ದಿವಸದಲ್ಲಿ ಸೋಲಾರ್ ಲೈಟ್ ಅಳವಡಿಸಿ ಹಾಗೂ ಮುಂದಿನ ದಿನಗಳಲ್ಲಿ ಮನೆಯನ್ನು ಕಟ್ಟಿ ಕೊಡುವ ಭರವಸೆ ನೀಡಿದರು.
![](https://zoomintv.online/wp-content/uploads/2020/11/WhatsApp-Image-2020-11-10-at-6.14.41-PM-1024x637.jpeg)
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಜಯಶ್ರೀ ಕೋಡಂದೂರು, ಪುಣಚ ಮಹಾಶಕ್ತಿ ಕೇಂದ್ರದ ಸಂಚಾಲಕರಾದ ಶ್ರೀ ಹರಿಪ್ರಸಾದ್ ಯಾದವ್, ಮಾಣಿಲ ಗ್ರಾಮದ ಕಾರ್ಯಕರ್ತರಾದ ಶ್ರೀ ಎಸ್ ನಾರಾಯಣ , ಅಶೋಕ್ ಶೆಟ್ಟಿ ಬಿರ್ಕಾಪು ಕೃಷ್ಣಾನಂದ ಮಾಣಿ ಮೂಲೆ , ಮಂಜುನಾಥ ಶೆಟ್ಟಿ ಬಿರ್ಕಾಪು, ಕೃಷ್ಣಭಟ್ಟ ಬಾಳೆಕಾನ ಅಕ್ಷಯ್ ಬಾಳೆಕಾನ ಉದಯ ನಾಯಕ್ ಪಕಳಕುಂಜ, ಗೀತಾನಂದ ಶೆಟ್ಟಿ ಮಾಣಿಲ ಗುತ್ತು, ಪ್ರಸಾದ್ ಮುರುವ, ಜಗನ್ನಾಥ ದಂಡೆಪ್ಪಾಡಿ ಪೆರುವಾಯಿ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಗೀತಾನಂದ ಶೆಟ್ಟಿ ಹಿಂದುಳಿದ ವರ್ಗ ಮೋರ್ಚದ ಪುತ್ತೂರು ಮಂಡಲ ಅಧ್ಯಕ್ಷರಾದ ಸುನೀಲ್ ದಡ್ಡು ಉಪಸ್ಥಿತರಿದ್ದರು.
![](https://zoomintv.online/wp-content/uploads/2020/11/WhatsApp-Image-2020-11-10-at-6.14.42-PM-1024x577.jpeg)