ಶಿವಮೊಗ್ಗ : ರಾಗಿಗುಡ್ಡದಲ್ಲಿ ನಡೆದ ಗಲಭೆ ಬಗ್ಗೆ ಶಿವಮೊಗ್ಗ ಎಸ್ಪಿ ಮಿಥುನ್ ಧಿಡೀರ್ ಸುದ್ದಿಗೋಷ್ಠಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಗಿಗುಡ್ಡದಲ್ಲಿ ನಡೆದ ಗಲಭೆ 6 ಗಂಟೆ ಸುಮಾರಿಗೆ ನಡೆದಿದೆ. ಮುಕ್ಕಾಲು ಗಂಟೆಯಲ್ಲಿ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂತು. ಈ ಕೇಸ್ನ ಆರೋಪಿಗಳನ್ನೇಲ್ಲಾ ಈಗಾಗಲೇ ಬಂಧಿಸಿದ್ದೀವಿ ಎಂದು ಹೇಳಿದ್ದಾರೆ.
ಮಾತು ಮುಂದುವರಿಸಿದ ಎಸ್ಪಿ ಮಿಥುನ್, 24 ಎಫ್ಐಆರ್ನಲ್ಲಿ 60 ಆರೋಪಿಗಳನ್ನ ಬಂಧಿಸಿದ್ದೀವಿ. ಈ ಗಲಭೆಯಲ್ಲಿ ಎಲ್ಲಾ ಕಮ್ಯುನಿಟಿಯವರು ಇದ್ದಾರೆ. ಎಲ್ಲಾ ಕಮ್ಯುನಿಟಿಯವರು ಆರೋಪಿಗಳು, ಸಂತ್ರಸ್ಥರು ಇದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಶಿವಮೊಗ್ಗ ಸಿಟಿಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಯಾರೂ ಆತಂಕ ಪಡಬೇಡಿ. ಎಲ್ಲಾ ಸಮುದಾಯದ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಿದ್ದೇವೆ. ಯಾರ ಜೀವಕ್ಕೂ ಅಪಾಯ ಇಲ್ಲ.
ಓಮಿನಿ ಗಾಡಿಯವರನ್ನೂ ವಿಚಾರಣೆ ನಡೆಸಿದ್ದೇವೆ. ಆ ಗಾಡಿಯಲ್ಲಿ ಎರಡೂ ಸಮುದಾಯದ ವಿದ್ಯಾರ್ಥಿಗಳು ಇದ್ದರು. ನ್ಯಾಮತಿಯಿಂದ ಇಲ್ಲಿಗೆ ಬಂದಿದ್ದರು. ಆ ವಿದ್ಯಾರ್ಥಿಗಳ ಕ್ರಿಮಿನಲ್ ಹಿನ್ನೆಲೆಯನ್ನ ಚೆಕ್ ಮಾಡ್ತಿದ್ದೀವಿ. ಕ್ರಿಮಿನಲ್ ಯಾರೇ ಆಗಿದ್ದರೂ ಅವರು ಕ್ರಿಮಿನಲ್. ಅವರು ಯಾವ ಸಮುದಾಯ ಅನ್ನುವುದನ್ನ ನೋಡಬಾರದು. ಸಾರ್ವಜನಿಕರು ಆತಂಕಗೊಳ್ಳದೆ ಓಡಾಟ ಮಾಡಬಹುದು ಎಂದು ಎಸ್ಪಿ ಮಿಥುನ್ ಹೇಳಿದ್ದಾರೆ.
ಕತ್ತಿ ತೋರಿಸಿ ಡ್ಯಾನ್ಸ್
ಸಾಗರದಲ್ಲಿ ಕತ್ತಿ ತೋರಿಸಿ ಡ್ಯಾನ್ಸ್ ಮಾಡಿದ ಬಗ್ಗೆ ಮಾತನಾಡಿದ ಎಸ್ಪಿ ಮಿಥುನ್, ಅದು ನಕಲಿ ಕತ್ತಿ, ಅದರ ಬಗ್ಗೆ ವಿಚಾರಣೆ ನಡೆಸುತ್ತಿದ್ದೇವೆ. ಅದರ ಬಗ್ಗೆ ಕಾನೂನಿನಡಿ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.