ಬೆಳ್ಳಾರೆ : ಕಾಡುಹಂದಿಗಳ ಗುಂಪು ಹಠಾತ್ ರಸ್ತೆ ದಾಟಿದ ಹಿನ್ನೆಲೆ ಅಪಘಾತವಾಗಿ ಯುವಕ ಮೃತಪಟ್ಟ ಘಟನೆ ಬೆಳ್ಳಾರೆ ಸಮೀಪದ ಪೆರುವಾಜೆಯಲ್ಲಿ ನಡೆದಿದೆ.
ಉಮಿಕ್ಕಳ ನಿವಾಸಿ ಅಬ್ದುಲ್ ರಜಾಕ್ ಎಂಬವರ ಪುತ್ರ ಮಹಮ್ಮದ್ ರಾಝಿಕ್ ಮೃತ ಯುವಕ.
ರಾಝಿಕ್ ಬೆಳ್ಳಾರೆಯಿಂದ ವಸ್ತುಗಳನ್ನು ಖರೀದಿಸಿ ಅಜ್ಜಿ ಮನೆಗೆ ಸಂಬಂಧಿ ಜೊತೆ ಆಕ್ಟಿವಾದಲ್ಲಿ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಕಾಡು ಹಂದಿಗಳ ಗುಂಪು ಹಠಾತ್ ಆಗಿ ರಸ್ತೆ ದಾಟಿದ್ದು, ಆಕ್ಟಿವಾ ಸವಾರ ಅವುಗಳನ್ನು ನೋಡಿ ಗಾಬರಿಯಾಗಿ ಬ್ರೇಕ್ ಹಾಕಿದ್ದು, ಈ ವೇಳೆ ರಸ್ತೆ ಬದಿಯ ಮರಕ್ಕೆ ಆಕ್ಟಿವಾ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಸವಾರ, ಸಹಸವಾರನನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ರಾಝಿಕ್ ದಾರಿ ಮಧ್ಯೆ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.