ಪುಣಚ: ಪುಣಚದ ಅಜೇರು ಎಂಬಲ್ಲಿ ಶಾರದ ಎನ್ನುವವರು ಗ್ಯಾಂಗ್ರಿನ್ ನಿಂದ ಬಳಲುತ್ತಿತ್ತು. 2 ದಿನಕ್ಕೊಮ್ಮೆ ಕಾಲಿನ ಡ್ರೆಸ್ಸಿಂಗ್ ಮಾಡಲು ಪರೇಲ್ತಾಡ್ಕ ಎಂಬಲ್ಲಿಗೆ ಬರಲು ಸುಮಾರು ಅರ್ಧ ಕಿ.ಮಿ ದೂರ ಅವರ ಮಗ ಹೊತ್ತು ಕೊಂಡು ಬರಬೇಕಾದ ಪರಿಸ್ಥಿತಿ ಇದ್ದು,
ಸುಮಾರು ಒಂದೂವರೆ ವರುಷದಿಂದ ಪ್ರತಿ 2 ದಿನಕೊಮ್ಮೆ ಸುಮಾರು 300 ರೂ. ಆಟೋ ಬಾಡಿಗೆ ಕೊಟ್ಟು ಅವರ ಮಗ ಇವರನ್ನು ಕರೆದು ಬರುತ್ತಿದ್ದಾರೆ.
ಇವರ ಮನೆಗೆ ತೆರಳಲು ಸರಿಯಾದ ದಾರಿಯ ವ್ಯವಸ್ಥೆ ಕೂಡ ಇಲ್ಲ, ಶಾರದಾ ರವರ ಮಗ ಗಾರೆ ಕೆಲಸದ ಸಹಾಯಕರಾಗಿ ಕೆಲಸ ಮಾಡುತ್ತಿದ್ದು, ವಾರದ 3 ದಿನ ಮಾತ್ರ ಇವರು ಕೆಲಸಕ್ಕೆ ಹೋಗುವಂತಾಗಿದೆ. ಉಳಿದ ಎರಡು ದಿನಗಳಲ್ಲಿ ತನ್ನ ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬರಬೇಕಾಗಿದೆ. ವಾರದ ಎರಡು ಮೂರು ದಿನ ಕೆಲಸ ನಿರ್ವಹಿಸಿದ ಸಂಬಳವೂ ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಬರುವುದಕ್ಕೆ ಸರಿ ಹೋಗುತ್ತಿದ್ದು, ಇವರಿಗೆ ಸರಿಯಾದ ರೀತಿಯ ಮನೆಯ ವ್ಯವಸ್ಥೆ ಕೂಡ ಇರದೇ ಬಹಳ ಕಷ್ಟದ ಬದುಕನ್ನು ತಾಯಿ ಮತ್ತು ಮಗ ಸಾಗಿಸುವಂತಾಗಿದೆ.
ಇವರ ಕಷ್ಟಕ್ಕೆ ಸ್ಪಂದಿಸಲು ಮುಂದಾದ ದಕ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿಯ ಅಧ್ಯಕ್ಷರಾದ ಅಶೋಕ ನಾಯ್ಕ ಕೆದಿಲ ರವರು ಸ್ಥಳೀಯ ಪಂಚಾಯತ್ ಗೆ ತೆರಳಿ ಆಶಾ ಕಾರ್ಯಕರ್ತೆಯರು ಅವರ ಮನೆಗೆ ತೆರಳಿ ಕಾಲು ಡ್ರೆಸ್ಸಿಂಗ್ ಮಾಡಿ ಕೊಟ್ಟರೆ ಅವರಿಗೆ ತುಂಬಾ ಸಹಾಯವಾದೀತು ಎಂದು ಪಿಡಿಓ ರಲ್ಲಿ ಮನವಿ ಮಾಡಿದಾಗ, ಆಯಿತು ಏನಾದರೂ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದ್ದು, ಇಂದಿಗೆ 10 ದಿವಾಸವಾದರು, ಪಂಚಾಯತ್ ನಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ. ಈ ಬಡ ಕುಟುಂಬದ ತಾಯಿ ಮಗನಿಗೆ ನೆರವಿನ ಅಗತ್ಯವಿದೆ, ಆರೋಗ್ಯ ಇಲಾಖೆ ಇವರ ಸಂಕಷ್ಟಕ್ಕೆ ಶೀಘ್ರವಾಗಿ ಸ್ಪಂದಿಸಬೇಕು ಎಂದು ಅಶೋಕ ನಾಯ್ಕ ಕೆದಿಲ ರವರು ಮನವಿ ಮಾಡಿಕೊಂಡಿದ್ದಾರೆ.