ವಿಟ್ಲ : ವಿಶ್ವ ಹಿಂದೂ ಪರಿಷತ್ ಬಜರಂಗದಳ ಘಟಕ ಶ್ರೀ ಕೃಷ್ಣ ಶಾಖೆ ಪೆರುವಾಯಿ ಹಾಗೂ ಹಿಂದೂ ಹೃದಯ ಸಂಗಮ ಜನಸೇವಾ ಕೇಂದ್ರ ಪೆರುವಾಯಿ ಇದರ ವತಿಯಿಂದ ಪೆರುವಾಯಿ ಗ್ರಾಮದ ಅಶ್ವಥನಗರ ನಿವಾಸಿ ಸುಶೀಲ ನಾರಾಯಣ ಆಚಾರ್ಯ ದಂಪತಿ ಕುಟುಂಬಕ್ಕೆ ಹಿಂದೂ ಬಾಂಧವರ ಸಹಕಾರದಿಂದ ನಿರ್ಮಿಸಲ್ಪಟ್ಟ ನೂತನ ಮನೆಯ ಹಸ್ತಾಂತರದ ಸರಳ ಕಾರ್ಯಕ್ರಮವನ್ನು ಸರಕಾರದ ಕೋವಿಡ್ ನಿಯಮಾವಳಿಯಂತೆ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ಮಾಣಿಲ ಶ್ರೀಧಾಮ ಶ್ರೀ ಮೋಹನದಾಸ ಸ್ವಾಮೀಜಿಗಳ ಶುಭಾಶೀರ್ವಾದದಿಂದ ನಡೆಯಿತು.
ಕಾರ್ಯಕ್ರಮದಲ್ಲಿ ಬಜರಂಗದಳ ರಾಜ್ಯ ಸಹ ಸಂಯೋಜಕ ಹಾಗೂ ಧಾರ್ಮಿಕ ಪರಿಷತ್ ಸದಸ್ಯರಾದ ಮುರಳಿಕೃಷ್ಣ ಹಸಂತ್ತಡ್ಕ, ಜಿಲ್ಲಾ ಸಂಚಾಲಕರಾದ ಶ್ರೀಧರ ತೆಂಕಿಲ, ಜಿಲ್ಲಾ ಸಹ ಕಾರ್ಯದರ್ಶಿ ಗೋವರ್ಧನ್,ಸಂಘದ ತಾಲೂಕು ಸಂಪರ್ಕ ಪ್ರಮುಖ್ ವಿನೋದ್ ಶೆಟ್ಟಿ ಅಡ್ಕಸ್ಥಳ,ವಿಟ್ಲ ಪ್ರಖಂಡ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರಾದ ಕೃಷ್ಣಪ್ಪ ಕಲ್ಲಡ್ಕ, ಕಾರ್ಯಾಧ್ಯಕ್ಷರಾದ ಪದ್ಮನಾಭ ಕಟ್ಟೆ ವಿಟ್ಲ ,ಬಜರಂಗದಳ ಸಹ ಸಂಚಾಲಕರಾದ ಚಂದ್ರಹಾಸ್ ಕನ್ಯಾನ,ಭಾಜಪ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ದಯಾನಂದ ಶೆಟ್ಟಿ ಉಜಿರೆಮಾರು, ಬಜರಂಗದಳ ವಿಟ್ಲ ಪ್ರಖಂಡದ ಯತೀಶ್ ಪೆರುವಾಯಿ,ಸಂಘದ ಮಂಡಲ ಕಾರ್ಯವಾಹ ಜ್ಞಾನಪ್ರಕಾಶ್ ಆಚಾರ್ಯ,ವಿಶ್ವ ಹಿಂದೂ ಪರಿಷತ್ ಪೆರುವಾಯಿ ಘಟಕದ ಗೌರವಾಧ್ಯಕ್ಷರಾದ ಮಂಜುನಾಥ ಆಚಾರ್ಯ,ಅಧ್ಯಕ್ಷರಾದ ಶೇಖರ ಪೂಜಾರಿ,ಬಜರಂಗದಳ ಸಂಚಾಲಕರಾದ ಮೋಕ್ಷಿತ್ ಪೆರುವಾಯಿ,ಪ್ರಮುಖರಾದ ನಾಗೇಶ್ ಮಾಸ್ಟರ್ ಪೆರುವಾಯಿ,ಆನಂದ್ ಶೆಟ್ಟಿ ಮುಳಿಯ,ಪ್ರಕಾಶ್ಚಂದ್ರ ಶೆಟ್ಟಿ ದರ್ಖಾಸು , ಪ್ರಭಾಕರ ಶೆಟ್ಟಿ ಕಲೈತ್ತಿಮಾರು ,ಗೋಪಾಲಕೃಷ್ಣ ಶೆಟ್ಟಿ ಸೇನೆರಪಾಲು, ಗೋಪಾಲ ಮಡಿವಾಳ ಬೆರಿಪದವು, ಮನೋಹರ್ ಶೆಟ್ಟಿ ಪೇರಡ್ಕ , ಮನೋರಾಜ್ ರೈ ಅಡ್ವಾಯಿ, ಶಿವರಾಮ ಮಣಿಯಾಣಿ ತಚ್ಚಮ್ಮೆ,ಯೋಗೀಶ್ ಆಳ್ವ ಕಲೈತ್ತಿಮಾರು ಹಾಗೂ ಹಿಂದೂ ಬಾಂಧವರು ಉಪಸ್ಥಿತರಿದ್ದರು.