ಬೆಟ್ಟಂಪಾಡಿ: ವನಪರ್ವ ಅಭಿಯಾನದೊಂದಿಗೆ ಜೋಡಿಸಿಕೊಳ್ಳುತ್ತಿರುವ ಯುವ ಸಮುದಾಯ ಪರಿಸರ ಪರ ಕಾಳಜಿಯನ್ನು ಬೆಳೆಸಿಕೊಂಡು ಇತರರಿಗೆ ಮಾದರಿಯಾಗಲಿ ಎಂದು ಕಾಲೇಜು ಶಿಕ್ಷಣ ಇಲಾಖೆ, ಮಂಗಳೂರು ವಲಯದ ವಿಶೇಷಾಧಿಕಾರಿ ಡಾ. ಜಯಕರ ಭಂಡಾರಿ ಹೇಳಿದರು. ಇವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿಯ ಎನ್ನೆಸ್ಸೆಸ್ ಘಟಕಗಳು ಆಯೋಜಿಸುತ್ತಿರುವ ವನಪರ್ವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಭಿಪ್ರಾಯ ವ್ಯಕ್ತ ಪಡಿಸಿದರು. ಕಾಲೇಜಿಗೆ ಭೇಟಿ ನೀಡಿ ಸಸಿ ನೆಡುವ ಮುಖಾಂತರ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.
ಅಭಿಯಾನದ ಬಗ್ಗೆ ವಿವರಿಸಿದ ಕಾಲೇಜು ಎನ್ನೆಸ್ಸೆಸ್ ಅಧಿಕಾರಿ ಹರಿಪ್ರಸಾದ್ ಎಸ್ ೨೦೨೦ ಜೂನ್ ೦೫ರಂದು ಆರಂಭಗೊಂಡ “ವನಪರ್ವ ಅಭಿಯಾನ”ದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸುತ್ತಿದ್ದು ನೆಟ್ಟ ಸಸಿಯನ್ನು ಪೋಷಿಸುವ ಮುಖಾಂತರ ಅರ್ಥಪೂರ್ಣ ಭಾಗವಹಿಸುವಿಕೆಯ ಮೂಲಕ ಇತರರಿಗೆ ಮಾದರಿಯಾಗುತ್ತಿದ್ದಾರೆ ಎಂದರು.
ಕಾಲೇಜಿನ ಆವರಣದಲ್ಲಿ ಜರುಗಿದ ಸಸಿ ನೆಡುವ ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ವರದರಾಜ ಚಂದ್ರಗಿರಿ, ಕಾಲೇಜು ರಕ್ಷಕ-ಶಿಕ್ಷಕ ಸಂಘದ ಕೋಶಾಧಿಕಾರಿ ರಾಜಗೋಪಾಲ ರೈ, ಉಪನ್ಯಾಸಕರಾದ ದಾಮೋದರ ಗೌಡ ಕಣಜಾಲು, ಶ ಉದಯರಾಜ್ ಎಸ್, ದೀಕ್ಷಿತ್ ಕುಮಾರ್,ಶ್ರೀರಾಮ ಕೆ ಮತ್ತು ಸ್ವಯಂ ಸೇವಕರು ಉಪಸ್ಥಿತರಿದ್ದರು.