ಹಿಂದೂ ಜಾಗರಣ ವೇದಿಕೆ ಹನುಮಾನ್ ಘಟಕ ಆನಡ್ಕ ಇದರ ನೇತೃತ್ವದಲ್ಲಿ ಕರ್ಗಲ್ ಜಂಕ್ಷನ್ ನಲ್ಲಿ ನಿವೃತ್ತ ಆಹಾರ ಅಧಿಕಾರಿ ಮೋನಪ್ಪ ಪುರುಷ ಮುಗೇರಡ್ಕ ಇವರು ನೂತನ ವಾಗಿ ನಿರ್ಮಿಸಲಾದ ಕೇಸರಿ ಧ್ವಜ ಕಟ್ಟೆಯನ್ನು ಉದ್ಘಾಟನೆ ಮಾಡಿದರು.
![](https://zoomintv.online/wp-content/uploads/2020/11/IMG-20201130-WA0005-1024x768.jpg)
ದುರದೃಷ್ಟವಶಾತ್ ಎಂಬಂತೆ ಧ್ವಜ ಕಟ್ಟೆಯನ್ನು ನಿರ್ಮಾಣ ಮಾಡುವ ಸಂದರ್ಭದಲ್ಲಿ ಹೃದಯಾಘಾತದಿಂದ ಪೂವಪ್ಪ ಎಂಬವರು ಮೃತಪಟ್ಟಿದ್ದು, ಉದ್ಘಾಟನೆ ವೇಳೆ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ಧ್ವಜ ಕಟ್ಟೆಯ ನಿರ್ಮಾಣ ಕೆಲಸವನ್ನು ಪೂರ್ಣ ಗೊಳಿಸಿದ ಗಿರೀಶ್ ಕರ್ಗಲ್ ಅವರನ್ನು ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಹಿಂದು ಜಾಗರಣ ವೇದಿಕೆ ಪುತ್ತೂರು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಚಿನ್ಮಯ್ ಈಶ್ವರಮಂಗಲ, ತಾಲ್ಲೂಕು ಅಧ್ಯಕ್ಷ ಅಶೋಕ್ ತ್ಯಾಗರಾಜನಗರ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಅವಿನಾಶ್ ಪುರುಷರಕಟ್ಟೆ, ತಾಲ್ಲೂಕು ಸಂಪರ್ಕ ಪ್ರಮುಕ್ ದಿನೇಶ್ ಪಂಜಿಗ, ತಾಲ್ಲೂಕು ಕಾರ್ಯದರ್ಶಿ ಪುಷ್ಪರಾಜ್ ಸವಾನೂರ್ ಮತ್ತು ಹಿಂದು ಜಾಗರಣ ವೇದಿಕೆ ಆನಡ್ಕ ಘಟಕ ದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಅಧ್ಯಕ್ಷರಾದ ಪ್ರಶಾಂತ್ ಸ್ವಾಗತಿಸಿ ದಿನೇಶ್ ಪಂಜಿಗ ಧನ್ಯವಾದ ಸಲ್ಲಿಸಿದರು.
![](https://zoomintv.online/wp-content/uploads/2020/11/IMG-20201130-WA0010-1024x768.jpg)
![](https://zoomintv.online/wp-content/uploads/2020/11/IMG-20201130-WA0013-1024x768.jpg)