ಪುತ್ತೂರು: ಪುತ್ತೂರು ಘಟಕಕ್ಕೆ ಜಿಲ್ಲಾ ಸಮಾದೇಷ್ಠರಾದ ಡಾ||ಮುರಳಿ ಮೋಹನ್ ಚೂಂತಾರು ರವರು ಭೇಟಿ ನೀಡಿದ ಸಂದರ್ಭದಲ್ಲಿ ಉಪ್ಪಿನಂಗಡಿ ಘಟಕಕ್ಕೆ ಹಾಗೂ ಕಡಬ ಘಟಕಕ್ಕೆ ಆರೋಗ್ಯ ಇಲಾಖೆ ನೀಡಿದ ಸೊಳ್ಳೆ ಪರದೆ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಪುತ್ತೂರು ಘಟಕಾಧಿಕಾರಿ ಅಭಿಮನ್ಯು ರೈ, ಉಪ್ಪಿನಂಗಡಿ ಪ್ರಭಾರ ಘಟಕಾಧಿಕಾರಿ ದಿನೇಶ್ .ಬಿ, ಸಾರ್ಜೆಂಟ್ ಸುದರ್ಶನ್, ಉಪ್ಪಿನಂಗಡಿ ಘಟಕದ ಎಎಸ್ ಎಲ್ ಜನಾರ್ಧನ ಆಚಾರ್ಯ, ಸುಖೀತಾ ಶೆಟ್ಟಿ, ಉಪಸ್ಥಿತರಿದ್ದರು.