ವೇಣೂರು : ವಿದ್ಯೆ ಉದ್ಯೋಗ ಸಂಪರ್ಕ ಎನ್ನುವ ಧ್ಯೇಯವಾಕ್ಯದೊಡನೆ, ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವವನ್ನು ಆಧರಿಸಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ವೇಣೂರು ಘಟಕದ 2020-21ನೇ ಸಾಲಿನ ಪದಗ್ರಹಣ ಸಮಾರಂಭವು ಡಾ. ಬಿ ಆರ್ ಅಂಬೇಡ್ಕರ್ ಭವನ ಕುಕ್ಕೇಡಿಯಲ್ಲಿ ನಡೆಯಿತು.
![](https://zoomintv.online/wp-content/uploads/2020/12/WhatsApp-Image-2020-12-21-at-1.23.17-PM.jpeg)
ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ನೂತನ ಸಾಲಿಗೆ ಅಧ್ಯಕ್ಷರಾಗಿ ಅರುಣ್ ಕೋಟ್ಯಾನ್ ಆಯ್ಕೆಯಾದರು. ಇನ್ನುಳಿದಂತೆ ಹಲವು ಕ್ಷೇತ್ರಗಳಿಗೆ ನಿರ್ದೇಶಕರನ್ನು ನೇಮಕ ಮಾಡಲಾಯಿತು.. ಕಾರ್ಯಕ್ರಮದಲ್ಲಿ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ನಡೆಸಲಾಯಿತು.
![](https://zoomintv.online/wp-content/uploads/2020/12/WhatsApp-Image-2020-12-21-at-1.23.17-PM-1.jpeg)
![](https://zoomintv.online/wp-content/uploads/2020/12/WhatsApp-Image-2020-12-21-at-1.23.17-PM-4.jpeg)
![](https://zoomintv.online/wp-content/uploads/2020/12/WhatsApp-Image-2020-12-21-at-1.23.17-PM-5.jpeg)
![](https://zoomintv.online/wp-content/uploads/2020/12/WhatsApp-Image-2020-12-21-at-2.51.09-PM.jpeg)
![](https://zoomintv.online/wp-content/uploads/2020/12/WhatsApp-Image-2020-12-21-at-1.23.17-PM-6.jpeg)
ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷರಾದ ನರೇಶ್ ಕುಮಾರ್ ಸಸಿಹಿತ್ಲು ಪದಪ್ರಧಾನ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಉದ್ಯಮಿ ಜಯಂತ್ ನಡುಬೈಲು,ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್, ಅಧ್ಯಕ್ಷರಾದ ನವೀನ್ ಪಚ್ಚೇರಿ, ಕೇಂದ್ರ ಸಮಿತಿ ಮಾಜಿ ಅಧ್ಯಕ್ಷರಾದ ಪ್ರೇಮನಾಥ್, ವೇಣೂರು ಘಟಕದ ಸ್ಥಾಪಕಾಧ್ಯಕ್ಷರಾದ ನಿತೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಸತೀಶ್ ಬಿ. ಎನ್. ಸ್ವಾಗತಿಸಿದರು ಕಾರ್ಯಕ್ರಮವನ್ನುರಾಜೇಂದ್ರ ಪೂಜಾರಿ ಮತ್ತು ಪ್ರಜ್ಞಾ ಓಡಿಲ್ನಾಳ ನಿರೂಪಿಸಿದರು.