ಉಪ್ಪಿನಂಗಡಿ: ಮೀನಿನ ಅಂಗಡಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಕಿಡಿಗೇಡಿಗಳ ಬಂಧನಕ್ಕೆ ಆಗ್ರಯಿಸಿ ಹಿಂದೂ ಜಾಗರಣ ವೇದಿಕೆಯು ಶುಕ್ರವಾರ ಉಪ್ಪಿನಂಗಡಿ ಬಂದ್ ಗೆ ನೀಡಿದ್ದ ಕರೆಯನ್ನು ಪೋಲಿಸ್ ಅಧಿಕಾರಿಗಳ ಮನವಿಯ ಮೇರೆಗೆ ಮುಂದೂಡಲಾಗಿದೆ.
ಆರೋಪಿಗಳ ಬಂಧನಕ್ಕೆ ಸೆ.5 ರ ತನಕ ಗಡುವು ನೀಡಿದ್ದು, ಅಷ್ಟರಲ್ಲಿ ಆರೋಪಿಗಳನ್ನು ಬಂಧಿಸದಿದ್ದಲ್ಲಿ ಸೆ.6 ರ ಸೋಮವಾರ ಉಪ್ಪಿನಂಗಡಿ ಚಲೋ ಗೇ ನಿರ್ಧರಿಸುವುದಾಗಿ
ಹಿಂದೂ ಜಾಗರಣವೇದಿಕೆ ಉಪ್ಪಿನಂಗಡಿ ಘಟಕ ಪ್ರಕಟಣೆಯಲ್ಲಿ ತಿಳಿಸಿದೆ.