ಪುತ್ತೂರು: ಮೊಬೈಲ್ ರಿಟೈಲ್ ಅಸೋಸಿಯೇಷನ್ ಪದಾಧಿಕಾರಿಗಳು ಶಾಸಕರನ್ನು ಭೇಟಿ ಮಾಡಿ ವೀಕೆಂಡ್ ಕರ್ಪ್ಯೂ ಅನ್ನು ರದ್ದು ಮಾಡುವ ಬಗ್ಗೆ ಸೆ.3 ರಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಾಸಕರು ಸೋಮವಾರ ದಿವಸ ಮುಖ್ಯಮಂತ್ರಿಗಳು , ಉಸ್ತುವಾರಿ ಸಚಿವರುಗಳಲ್ಲಿ ಮಾತನಾಡಿ ಮುಂದಿನ ವಾರದ ಅಂತ್ಯದ ಮೊದಲು ನಮ್ಮಲ್ಲಿ ವೀಕೆಂಡ್ ಕರ್ಪ್ಯೂವನ್ನು ರದ್ದುಪಡಿಸುವ ನಿರ್ಣಯ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು. ಪುತ್ತೂರು ಎಸಿ ಯವರಿಗೆ ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ AIMRA ದಕ್ಷಿಣ ಕನ್ನಡ ಉಪಾಧ್ಯಕ್ಷ ಶಶಿರಾಜ್ ರೈ, ಪುತ್ತೂರು ಮೊಬೈಲ್ ರಿಟೈಲ್ ಅಧ್ಯಕ್ಷ ಪ್ರವೀಣ್ ಅಮೈ, ಗೌರವ ಅಧ್ಯಕ್ಷ ಸಿರಾಜ್ ಮತ್ತು ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.