ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಯುವ ನೇತೃತ್ವದಲ್ಲಿ ಜನ್ಮ ಫೌಂಡೇಶನ್ ಟ್ರಸ್ಟ್(ರಿ) ಪುತ್ತೂರು ಸಹಕಾರದೊಂದಿಗೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು ಇದರ ಎಸ್. ಎಸ್. ಎಲ್. ಸಿ ವಿದ್ಯಾರ್ಥಿಗಳಿಗೆ ರೋಟರಿ ಸದಸ್ಯರ ಸಹೃದಯ ಕೊಡುಗೆ ‘ವಿದ್ಯಾ ಸೇತು ವಿದ್ಯಾಭಿಯಾನ’ ಪುಸ್ತಕ ವಿತರಣೆ, ಗುರು ವಂದನೆ ಹಾಗೂ ವರ್ಣ ಚಿತ್ರ ಅನಾವರಣ ಕಾರ್ಯಕ್ರಮವೂ ಸೆ.15 ರಂದು ಕೆ.ಪಿ.ಎಸ್. ಕೆಯ್ಯೂರಿ ನಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಯ್ಯೂರು ಕೆ.ಪಿ.ಎಸ್. ಪ್ರೌಢಶಾಲೆಯ ಎಸ್. ಡಿ. ಎಂ. ಸಿ. ಕಾರ್ಯಧ್ಯಕ್ಷ ಎಸ್. ಟಿ. ಜಯರಾಮ ರೈ ಯವರು ವಹಿಸಿಲಿದ್ದಾರೆ. ಉದ್ಘಾಟನೆಯನ್ನು ವಿದ್ಯಾಸೇತು ವಿದ್ಯಾಭಿಯಾನದ ಚೇರ್ ಮೆನ್ ಉಮೇಶ್ ನಾಯಕ್ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಯಾಗಿ ಪೂರ್ವ ಸಹಾಯಕ ಗವರ್ನರ್ ರತ್ನಾಕರ ರೈ ಕೆದಂಬಾಡಿಗುತ್ತು, ಪೂರ್ವ ವಲಯ ಸೇನಾನಿ ನರಸಿಂಹ ಪೈ, ಕೆ. ಪಿ. ಎಸ್. ಪ್ರಾಂಶುಪಾಲರಾದ ಆನಂದ ಪಿ., ರೋಟರಿ ಪುತ್ತೂರು ಯುವ ಪೂರ್ವಾಧ್ಯಕ್ಷರಾದ ಸೂರಜ್ ಶೆಟ್ಟಿ, ರೋಟರಿ ಪುತ್ತೂರು ಯುವ ಪೂರ್ವಾಧ್ಯಕ್ಷರಾದ ಚೇತನ್ ಪ್ರಕಾಶ್ ಕಜೆ, ರೋಟರಿ ಪುತ್ತೂರು ಯುವ ನಿಯೋಜಿತ ಅಧ್ಯಕ್ಷರಾದ ರಾಜೇಶ್ವರಿ ಆಚಾರ್ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.