ಮೂಡಬಿದಿರೆ: ಸಿಡಿಲು ಬಡಿದು ಇಬ್ಬರು ಯುವಕರು ಮೃತಪಟ್ಟು, ಮೂವರು ತೀವ್ರವಾಗಿ ಅಸ್ವಸ್ಥಗೊಂಡ
ಘಟನೆ ನ.1 ರಂದು ಸಂಜೆ ಮೂಡುಬಿದಿರೆ ಕಂಚಿಬೈಲ್ನಲ್ಲಿ ಘಟನೆ ನಡೆದಿದೆ.
ಮೃತಪಟ್ಟರನ್ನು ಕಂಚಿಬೈಲು ನಿವಾಸಿಗಳಾದ ಯಶವಂತ (22) ಹಾಗೂ ಮಣಿಪ್ರಸಾದ್ (22) ಎನ್ನಲಾಗಿದೆ.
ಗಣೇಶ್, ಸಂದೀಪ್ ಹಾಗೂ ಪ್ರವೀಣ್ ಅಸ್ವಸ್ಥಗೊಂಡವರು.
ಗಾಯಾಳುಗಳನ್ನು ಮೂಡುಬಿದಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ನ.1 ರಂದು ಸಂಜೆ ಸುಮಾರಿಗೆ ಮೂಡುಬಿದಿರೆಯ ಪುತ್ತಿಗೆ ಪಂಚಾಯತ್ ವ್ಯಾಪ್ತಿಯ ಕಂಚಿಬೈಲ್ ಯೆರುಗುಂಡಿ ಪ್ರದೇಶದಲ್ಲಿ ಸಿಡಿಲು ಸಹಿತ ಭಾರೀ ಮಳೆಯಾಗಿದ್ದು, ಐವರು ಯೆರುಗುಂಡಿ ಫಾಲ್ಸ್ಗೆ ತೆರಳಿದ್ದರು ಎಂದು ಹೇಳಲಾಗುತಿದ್ದು, ಅಲ್ಲಿ ಇವರಿಗೆ ಸಿಡಿಲು ಬಡಿದಿದೆ ಎನ್ನಲಾಗಿದೆ.