ಪುತ್ತೂರು : ಕೆಲ ದಿನಗಳ ಹಿಂದೆ ಕೊಕ್ಕಡ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿಯರನ್ನು ಶಾಲೆಯ ಮುಖ್ಯಸ್ಥರು ಬದ್ರಿಯಾ ಜುಮ್ಮಾ ಮಸೀದಿಗೆ ಕರೆದುಕೊಂಡು ಹೋದ ವಿಚಾರದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಹಿಂದೂ ಜಾಗರಣ ವೇದಿಕೆ ಪುತ್ತೂರು ಇದರ ಪ್ರಧಾನ ಕಾರ್ಯದರ್ಶಿ ಅವಿನಾಶ್ ಪುರುಷರಕಟ್ಟೆ ಇವರು ಪುತ್ತೂರಿನ ವಿಭಾಗಧಿಕಾರಿಗಳ ಮುಖಾಂತರ ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ಮನವಿಯನ್ನು ಸಲ್ಲಿಸಿದರು.
ಮಸೀದಿಯ ಒಳಗಡೆ ಕೂರಿಸಿ ಇಸ್ಲಾಂ ಧರ್ಮದ ಪ್ರವಚನ ನೀಡಿದ್ದು, ಕೊರೊನಾ ಮಹಾಮಾರಿ ಇರುವ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಎಲ್ಲಿಗೂ ಕರೆದುಕೊಂಡು ಹೋಗಬಾರದು ಎಂಬ ನಿಯಮ ಇದ್ದರೂ ಆ ನಿಯಮದ ವಿರುದ್ಧ ನಡೆದುಕೊಂಡಿದ್ದು ಈ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಾಗೂ ಫೋಟೋಗಳು ಹರಿಡಾಡುತ್ತಿದ್ದು ಬೇರೆ ಬೇರೆ ಕಾಮೆಂಟ್ ಗಳು, ವಿರೋಧ ಚರ್ಚೆಗಳು ನಡೆಯುತ್ತಿದೆ. ಕೋಮು ಸೂಕ್ಷ್ಮ ಪ್ರದೇಶವಾದ ಈ ಭಾಗದಲ್ಲಿ ಈ ವಿಚಾರಗಳು ಮುದೊಂದು ದಿನ ಶಾಂತಿ ಕದಡುವ ಸಾಧ್ಯತೆ ಇದೆ ಹಾಗಾಗಿ ಈ ರೀತಿ ನಡೆದುಕೊಂಡ ಶಾಲೆಯ ಮುಖ್ಯಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಮನವಿಯಲ್ಲಿ ತಿಳಿಸಿದರು.