ಮಂಗಳೂರು: ಮಹಿಳೆಯೊಬ್ಬರು ನೀಡಿದ ದೂರಿನನ್ವಯ ವಿಟ್ಲ
ಸಮೀಪದ ಬೈರಿಕಟ್ಟೆ ನಿವಾಸಿ ಮಸೀದಿ ಅಧ್ಯಕ್ಷ ಅಬೂಬಕ್ಕರ್ ಹಾಜಿ ಪುತ್ರ ಫಯಾದ್(30) ಮತ್ತು ಆತನ ಭಾವನ ವಿರುದ್ಧ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಅತ್ಯಾಚಾರ, ವಂಚನೆ ಪ್ರಕರಣ ದಾಖಲಾಗಿದೆ.
ಫಯಾದ್ ಎಂ ತನ್ನನ್ನು ಅತ್ಯಾಚಾರ ಮಾಡಿದ್ದಾನೆ. ಅಲ್ಲದೆ ಫಯಾದ್ ನ ಭಾವ ಮಂಗಳೂರಿನ ಬುರ್ಖಾ ಫಾರಡೈಸ್ ಮಾಲಕ ಉಂಬಾಯಿ ಯಾನೆ ಅಬ್ದುಲ್ ರಹಿಮಾನ್ ಸೇರಿ ಸುಮಾರು 1.50 ಕೋಟಿ ಹಣ ಪಡೆದು ವಂಚಿಸಿದ್ದಾರೆಂದು ಮಹಿಳೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪಾಂಡೇಶ್ವರ ಮಹಿಳಾ ಠಾಣಾ ಪೊಲೀಸರು ಐಪಿಸಿ ಸೆಕ್ಷನ್ 376, 420, 506 (34IP) ರಂತೆ ಪ್ರಕರಣ ದಾಖಲಿಸಿ ಆರೋಪಿಗಳನ್ನು ವಶ ಪಡೆದುಕೊಂಡಿದ್ದಾರೆ.
ಆರೋಪಿ ಫಯಾದ್ ಎಂಬಾತನಿಗೆ ಮೇ. 22 ರಂದು ಮದುವೆ ನಿಗದಿಯಾಗಿದ್ದು, ಆದರೆ ಹಸೆಮಣೆ ಏರಬೇಕಿದ್ದ ಫಯಾದ್ ಜೈಲು ಪಾಲಾಗಿದ್ದು ಕುಟುಂಬಸ್ಥರಲ್ಲಿ ಬೇಸರ ತಂದಿದೆ. ಮಸೀದಿ ಅಧ್ಯಕ್ಷರಾಗಿರುವ ಫಯಾದ್ ತಂದೆ ಸಂಸ್ಕಾರಯುತ ಜೀವನ ಸಾಗಿಸುತ್ತಿದ್ದು ಪುತ್ರ ಮತ್ತು ಅಳಿಯ(ಮಗಳ ಗಂಡ)ನ ಈ ಕೆಲಸದಿಂದಾಗಿ ಅವರು ತಲೆತಗ್ಗಿಸುವಂತಾಗಿದೆ ಎಂದು ಸಾರ್ವಜನಿಕರು ಘಟನೆ ಬಗ್ಗೆ ಧಿಗ್ರ್ಭಮೆ ವ್ಯಕ್ತಪಡಿಸಿದ್ದಾರೆ.