ಪುತ್ತೂರು: ಶ್ರೀ ಶಕ್ತಿ ಜಠಾಧಾರಿ ಭಜನಾ ಮಂದಿರ (ರಿ.) ಅಜ್ಜಿಕಲ್ಲು ಇದರ ಜೀರ್ಣೋದ್ಧಾರದ ವಿಜ್ಞಾಪನ ಪತ್ರವನ್ನು ಬಿಜೆಪಿ ರಾಜ್ಯಾಧ್ಯಕ್ಷರು, ಸಂಸದರಾದ ನಳಿನ್ ಕುಮಾರ್ ಕಟೀಲ್ ರವರು ಬಿಡುಗಡೆಗೊಳಿಸಿ ಮುಂದಿನ ಕೆಲಸ ಬಗ್ಗೆ ಸಲಹೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಭಜನಾ ಮಂದಿರದ ಅಧ್ಯಕ್ಷ ಅಜಿತ್ ಹೊಸಮನೆ, ಕಾರ್ಯದರ್ಶಿ ಗೀತೆಶ್, ಕೋಶಾಧಿಕಾರಿ ಶಶಿರಾಜ್ ಚಿಲ್ಮೆತ್ತಾರು, ಸಂದೀಪ್ ರೈ ಚಿಲ್ಮೆತ್ತಾರು, ಶರತ್ ಗೌಡ ದೇವಸ್ಯ, ಒಳಮೋಗ್ರು ಪಂಚಾಯತ್ ಮಾಜಿ ಅಧ್ಯಕ್ಷರಾದ ಪದ್ಮನಾಭ ಪೂಜಾರಿ, ದಯಾನಂದ ಶೆಟ್ಟಿ ಮೊಡಪ್ಪಾಡಿ, ಹರಿಪ್ರಸಾದ್ ರೈ ಮೊಡಪ್ಪಾಡಿ, ಪಂಚಾಯತ್ ಸದಸ್ಯ ಮಹೇಶ್ ಕೇರಿ, ಗುರುರಾಜ್ ನಾಯ್ಕ್ ಅಜ್ಜಿಕಲ್ಲು, ಮಹೇಶ್ ರೈ ಮೊಡಪ್ಪಾಡಿ, ಪ್ರಕಾಶ್ ನಾಯ್ಕ್ ಬೈರೋಡಿ, ಸಂದೀಪ್ ರೈ ಹೊಸಮನೆ, ಪ್ರಕಾಶ್ ರೈ ಹೊಸಮನೆ ಯುವಮೋರ್ಚಾ ಉಪಾಧ್ಯಕ್ಷ ಅರುಣ್ ವಿಟ್ಲ, ಸಹಜ್ ರೈ ಬಳೆಜ್ಜ, ಬಿಜೆಪಿ ಹಿಂದುಳಿದ ವರ್ಗ ಪ್ರಮುಖರಾದ ಸುಶಾಂತ್ ಅಜ್ಜಿಕಲ್ಲು, ರಿತೇಶ್ ಮೊಡಪ್ಪಾಡಿ ಉಪಸ್ಥಿತರಿದ್ದರು.