ಪುತ್ತೂರು: ಕೇಂದ್ರ ಸರ್ಕಾರ ನಿಷೇಧಿಸಿರುವ ಪಿಎಫ್ಐ ಸೇರಿದಂತೆ 8 ಸಂಘಟನೆಗಳ ಪೈಕಿ ಸವಣೂರಿನಲ್ಲಿದ್ದ ಪಿಎಫ್ಐ ಕಚೇರಿಗೆ ಪೊಲೀಸ್ ಇಲಾಖೆ, ಕಂದಾಯ ಇಲಾಖೆ ವತಿಯಿಂದ ಬೀಗ ಹಾಕಲಾಗಿದೆ.

ಕಡಬ ತಹಶೀಲ್ದಾರ್ ರಮೇಶ್ ಬಾಬು,ಉಪ ತಹಶೀಲ್ದಾರ್ ಮನೋಹರ್, ಬೆಳ್ಳಾರೆ ಪೊಲೀಸ್ ಠಾಣೆಯ ಎಸೈ ಸುಹಾಸ್, ಕಂದಾಯ ನಿರೀಕ್ಷಕ ಪೃಥ್ವಿ, ಗ್ರಾಮಕರಣಿಕ ಬಸವರಾಜು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.




























