ಕಾಂತಾರ ಸಿನಿಮಾ ತುಳು ಭಾಷೆಯಲ್ಲಿ ತೆರೆ ಕಾಣುತ್ತಿರುವ ಸಂದರ್ಭದಲ್ಲಿ ಮಾತನಾಡಿದ ಸ್ಯಾಂಡಲ್ ವುಡ್ ಖ್ಯಾತ ನಟ ರಿಷಬ್ ಶೆಟ್ಟಿ, ‘ಸಿನಿಮಾದ ಗೆಲ್ಲಿಸಿದ ಅಭಿಮಾನಿಗಳಿಗೆ ಧನ್ಯವಾದ. ದೈವಾರಾಧನೆಯನ್ನ ರೀಲ್ಸ್ ಮಾಡೋದು, ಕಾಂತಾರ ಸಿನಿಮಾದ ಪಾತ್ರವನ್ನ ಅನುಕರಣೆ ಮಾಡೋದು ಸರಿಯಲ್ಲ’.
‘ಇದು ಎಷ್ಟೋ ಜನರ ನಂಬಿಕೆ ಹೀಗೆ ಮಾಡಬೇಡಿ. ದೈವರಾಧನೆ ನಮ್ಮ ನಂಬಿಕೆ, ನಂಬೋರು ನಂಬಬಹುದು. ನಂಬದಿದ್ದರೆ ನಂಬದೇ ಇರಬಹುದು. ಅದು ಅವರವರ ನಂಬಿಕೆ. ಆದರೆ ದೈವರಾಧನೆಯ ಬಗ್ಗೆ ತಪ್ಪು ತಪ್ಪು ಮಾತನಾಡೋರು ಸುಳ್ಳು ಎಂದು ವಾದ ಮಾಡೋದು ಸರಿಯಲ್ಲ. ನಂಬದಿದ್ದರೆ ಪರವಾಗಿಲ್ಲ. ಆದ್ರೆ ಬೇರೆಯವರ ನಂಬಿಕೆಗೆ ಧಕ್ಕೆ ಮಾಡಬೇಡಿ’ ಎಂದು ಸಲಹೆ ನೀಡಿದ್ದಾರೆ.