ಪುತ್ತೂರು: ಹಿಂದೂ ಜಾಗರಣ ವೇದಿಕೆ ಶಿವಾಜಿ ಶಾಖೆ ಪುರುಷರಕಟ್ಟೆ, ಪುತ್ತೂರು ತಾಲೂಕು ವತಿಯಿಂದ ಜ.28 ರಂದು ಪುರುಷರಕಟ್ಟೆ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆ ಮುಂಭಾಗ ಸಾರ್ವಜನಿಕ ಶ್ರೀ ದುರ್ಗಾ ಪೂಜೆ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಉಪತಹಶೀಲ್ದಾರರಾದ ಮೋನಪ್ಪ ಪುರುಷ ಮುಗೇರಡ್ಕ ರವರು ವಹಿಸಿದ್ದರು.
ದಿಕ್ಸೂಚಿ ಭಾಷಣವನ್ನು ಪ್ರಾಂತ ಪ್ರಶಿಕ್ಷಣ ಪ್ರಮುಖರಾದ ರಾಧಾಕೃಷ್ಣ ಅಡ್ಯಂತಾಯ ನಿರ್ವಹಿಸಿದರು.
ಮುಖ್ಯ ಅತಿಥಿಗಳಾಗಿ ಪುತ್ತೂರು ಜಿಲ್ಲಾ ನ್ಯಾಯ ಜಾಗರಣಾ ಇದರ ಸಂಯೋಜಕರಾದ ರಾಜೇಶ್ ಬೊಳ್ಳುಕಲ್ಲು ಮತ್ತು ಪುತ್ತೂರು ತಾಲೂಕು ಸಂಪರ್ಕ ಪ್ರಮುಖರಾದ ಪ್ರಜ್ವಲ್ ಈಶ್ವರಮಂಗಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯೋಧರಾದ ದಾಮೋದರ ಕೆ. ಮತ್ತು ರೋಷಿನಿ ಕೆ ಆರ್, ನಾಟಿ ವೈದ್ಯರಾದ ಯಮುನ ಪೂಜಾರಿ ರವರನ್ನು ಸನ್ಮಾನಿಸಲಾಯಿತು.
ಸಂಜೆ 6.30 ರಿಂದ ರಾತ್ರಿ 8 ಗಂಟೆ ತನಕ ಶ್ರೀ ವನದುರ್ಗಾಂಬಿಕಾ ಭಜನಾ ಮಂಡಳಿ ದೇವಿ ನಗರ ಪುರುಷರಕಟ್ಟೆ ರವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಶಾಸಕರಾದ ಸಂಜೀವ ಮಠಂದೂರು, ಹಿಂದೂ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ, ಅಶೋಕ್ ರೈ ಕೋಡಿಂಬಾಡಿ, ಹಿಂಜಾವೇ ಪುತ್ತೂರು ನಗರದ ಗೌರವಧ್ಯಕ್ಷರಾದ ಕುಂಜಾಡಿ ಪ್ರಕಾಶ್ ಚಂದ್ರ, ಚಿನ್ಮಯ್ ಈಶ್ವರಮಂಗಲ, ಅಜಿತ್ ಹೊಸಮನೆ, ಅಶೋಕ್ ತ್ಯಾಗರಾಜನಗರ, ಸ್ವಸ್ತಿಕ್ ಸರ್ವೆ, ಮನೀಷ್, ಪುಷ್ಪರಾಜ್ ದರ್ಬೆ, ದಿನೇಶ್ ಪಂಜಿಗ ಆಗಮಿಸಿದ್ದರು.
ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಮತ್ತು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.