ಸುಬ್ರಹ್ಮಣ್ಯ: ಸಮೀಪದ ಆದಿಸುಬ್ರಹ್ಮಣ್ಯದ ಕಲ್ಲಗುಡ್ಡೆ ಎಂಬಲ್ಲಿ ಹೊಳೆ ಬದಿಯಲ್ಲಿ ಕಾಡಾನೆ ಕಂಡು ಬಂದ ಘಟನೆ ಶುಕ್ರವಾರ ನಡೆದಿದೆ.
ಕಾಡಾನೆ ನೀರು ಕುಡಿಯಲು ಆಗಮಿಸಿದೆ ಎನ್ನಲಾಗಿದ್ದು, ಬಳಿಕ ಅರಣ್ಯದತ್ತ ತೆರಳಿದೆ ಎಂದು ತಿಳಿದು ಬಂದಿದೆ.
ಐತ್ತೂರು- ಕಡ್ಯ ಕೊಣಾಜೆ ಸಂಪರ್ಕ ರಸ್ತೆಯ ಕೊಣಾಜೆ ಸಮೀಪ ರಾಮನಗರ ಕ್ರಾಸ್ ಎಂಬಲ್ಲಿ ಕಾಡಾನೆ ರಬ್ಬರ್ ತೋಟದಿಂದ ಆಗಮಿಸಿ ರಸ್ತೆ ದಾಟಿ ಇನ್ನೊಂದು ಭಾಗದ ರಬ್ಬರ್ ತೋಟದತ್ತ ಸಾಗಿದೆ. ಕೆಲಸದಿಂದ ಮನೆಗೆ ರಸ್ತೆಯಲ್ಲಿ ತೆರಳುತ್ತಿದ್ದವರಿಗೆ ಕಾಡಾನೆ ಕಾಣ ಸಿಕ್ಕಿದೆ ಎಂದು ತಿಳಿದು ಬಂದಿದೆ.