ಮಂಗಳೂರು : ದ.ಕ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತವು ಎಲ್ಲಾ ಅವಶ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಕೋವಿಡ್-19 ನಿಯಂತ್ರಣ ಕ್ರಮಗಳು ಜಾರಿಗೊಳಿಸುವ ಅಗತ್ಯತೆಯನ್ನು ಮನಗಂಡು ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರರವರು ಎ.27ರ ರಾತ್ರಿ 9ಗಂಟೆಯಿಂದ ಮೇ.12ರ ಪೂರ್ವಾಹ್ನ 6 ಗಂಟೆಯವರೆಗೆ ಮಾರ್ಗಸೂಚಿಯನ್ನು ಹೊರಡಿಸಿದ್ದಾರೆ.
ಈ ಬಗ್ಗೆ ಎಲ್ಲಾ ಮಾಹಿತಿ ಇಲ್ಲಿದೆ… :
- ಬೆಳಗ್ಗೆ 6 ರಿಂದ 10 ರವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಲಾಗಿದೆ.ಕೇವಲ ಕೃಷಿ ಕಟ್ಟಡ ಕಾಮಗಾರಿಗೆ ಮಾತ್ರ ವಿನಾಯಿತಿ ನೀಡಲು ಸರ್ಕಾರ ತೀರ್ಮಾನಿಸಿದೆ.
- ರಾತ್ರಿ ೯ರಿಂದ ಬೆಳಗ್ಗೆ ೬ರವರೆಗೆ ಕರ್ಫ್ಯೂ ಮುಂದುವರಿಕೆ ಮಾಡಲಾಗಿದೆ.
- ಮದ್ಯದಂಗಡಿಗಳು ಓಪನ್ ಇರಲಿದ್ದು, ಹೋಟೆಲ್
- ರೆಸ್ಟೋರೆಂಟ್ಗಳಲ್ಲಿ ಪಾರ್ಸಲ್ಗೆ ಅವಕಾಶ ನೀಡಲಾಗಿದೆ.
- ಜನರ ಓಡಾಟಕ್ಕೆ ಕೆಎಸ್ಆರ್ಟಿಸಿ ಸೇರಿದಂತೆ ಸಾರಿಗೆ ಸಂಚಾರ ಇರುವುದಿಲ್ಲ.
- ಸರಕು ಸಾಗಣೆ ವಾಹನ ಸಂಚಾರಕ್ಕೆ ಯಾವುದೇ ಅಡ್ಡಿ ಇಲ್ಲ.
- ರೈಲು ಸಾಗಣೆಗೆ ಹಾಗೂ ವಿಮಾನ ಸಂಚಾರಕ್ಕೆ ಅವಕಾಶ.
- ಇದರ ಪ್ರಯಾಣಿಕರಿಗೆ ಟಿಕೇಟೇ ಪಾಸ್.
- ಮೆಟ್ರೋ ಸೇವೆಯನ್ನು ಮೊಟುಕುಗೊಳಿಸಲಾಗಿದೆ.
- ಟ್ಯಾಕ್ಸಿ, ಕ್ಯಾಬ್ಗಳನ್ನು ನಿರ್ಬಂಧಿಸಲಾಗಿದೆ. ಆದರೂ ತುರ್ತು
- ಪರಿಸ್ಥಿತಿಯಲ್ಲಿ ಮಾರ್ಗಸೂಚಿಯನ್ವಯ ಅವಕಾಶ ನೀಡಲಾಗಿದೆ.
- ಶಾಲಾ, ಕಾಲೇಜು, ಕೋಚಿಂಗ್ ಸೆಂಟರ್ಗಳು ಎಲ್ಲವೂ ಮುಚ್ಚಲು ಆದೇಶಿಸಲಾಗಿದೆ.
- ಆನ್ಲೈನ್ ಶಿಕ್ಷಣಕ್ಕೆ ಉತ್ತೇಜನ ನೀಡಲು ನಿರ್ಧರಿಸಲಾಗಿದೆ.
- ಆಹಾರ ವಸ್ತುಗಳ ಡೆಲಿವರಿಗೆ ಅವಕಾಶವಿದೆ.
- ಸಿನೆಮಾ, ಶಾಪಿಂಗ್ ಮಾಲ್, ಬಾರ್ಸ್, ಕ್ಲಬ್ಸ್,
- ಅಡಿಟೋರಿಯಂ ಮೊದಲಾದವು ಮುಚ್ಚಿರಲಿವೆ.
- ರಾಜಕೀಯ, ಧಾರ್ಮಿಕ, ಮನೋರಂಜನೀಯ
- ಕಾರ್ಯಕ್ರಮ ನಿರ್ಬಂಧಿಸಲಾಗಿದೆ.
- ಈಗಾಗಲೇ ನಿಗದಿ ಆಗಿರುವ ಧಾರ್ಮಿಕ ಕಾರ್ಯಕ್ರಮಗಳನ್ನು
- ನಿರ್ಬಂಧದ ಅಡಿಯಲ್ಲಿ ಮಾಡಬಹುದು.
- ಆರೋಗ್ಯ ಸಂಬಂಧಿ ಸೇವೆಗಳು ಲಭ್ಯವಿರಲಿದ್ದು,
- ಕಂಟೋನ್ಮೆಂಟ್ ವಲಯದಿಂದ ಹೊರಗಿರಬೇಕು.
- ಕಂಟೋನ್ಮೆಂಟ್ ವಲಯದಿಂದ ಹೊರಗಿರುವ ಎಲ್ಲಾ ಕೃಷಿ ಸಂಬಂಧಿ ಚಟುವಟಿಕೆಗೆ ಅವಕಾಶ ನೀಡಲಾಗಿದೆ.
- ಮೀನುಗಾರಿಕೆ, ಹೈನುಗಾರಿಕೆ, ಕೋಳಿ ಸಾಕಣೆ, ಮಾಂಸ,ಡೈರಿ ಉತ್ಪನ್ನಗಳಿಗೆ ಅವಕಾಶ ನೀಡಲಾಗಿದೆ.
- ಮದುವೆಗೆ ೫೦ ಮಂದಿಗೆ ಅವಕಾಶ ನೀಡಿದ್ದು, ಅಂತ್ಯಸಂಸ್ಕಾರಕ್ಕೆ ೫ ಮಂದಿಗೆ ಸೀಮಿತಗೊಳಿಸಲಾಗಿದೆ.
- ಖಾಸಗಿ, ಸರ್ಕಾರಿ ವಾಹನಗಳಿರುವುದಿಲ್ಲ.
- ಅಂತರ್ ರಾಜ್ಯ ಹಾಗೂ ರಾಜ್ಯದೊಳಗಿನ ಪ್ರಯಾಣಿಕ ವಾಹನಗಳಿಗೆ ತುರ್ತು ಸಂದರ್ಭ ಮಾತ್ರ ಅವಕಾಶ ನೀಡಲಾಗಿದೆ.
- ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರವೇ ಪಾಸ್ ಆಗಿರುತ್ತದೆ