ಪುತ್ತೂರು : ಪುತ್ತೂರಿನ ರಾಗಿದಕುಮೇರು ನಿವಾಸಿ ನಿರಂಜನ ರೈ (35) ಎಂಬವರ ಮೃತದೇಹವು ಪಾಣೆಮಂಗಳೂರು ನೇತ್ರಾವತಿ ನದಿಯಲ್ಲಿ ಪತ್ತೆಯಾದ ಘಟನೆ ಇಂದು ನಡೆದಿದೆ.
ರಾಗಿದಕುಮೇರು ನಿವಾಸಿ ಪದ್ಮನಾಭ ರೈ ಯವರ ಮಗ ನಿರಂಜನ್ ರೈ ನಿನ್ನೆ ತಡರಾತ್ರಿ 12 ಗಂಟೆ ಸುಮಾರಿಗೆ ಹೊಟ್ಟೆನೋವು ಎಂದು ಆಸ್ಪತ್ರೆಗೆ ಹೋಗುದಾಗಿ ಹೇಳಿ ಮನೆಯಿಂದ ಬಂದಿದ್ದು, ಸಾವಿಗೆ ನಿಖರವಾದ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ. ನಿರಂಜನ್ ಅವರು ಸ್ನೇಹಿತನ ಬೈಕ್ ತೆಗೆದುಕೊಂಡು ಹೋಗಿದ್ದು ಬೈಕ್ ಇಂದು ಪಾಣೆಮಂಗಳೂರು ಬ್ರಿಡ್ಜ್ ಮೇಲೆ ಪತ್ತೆಯಾಗಿದ್ದು, ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ.
ಮೃತರು ತಂದೆ,ತಾಯಿ,ಪತ್ನಿ,ಮಗ ಮತ್ತು ಸಹೋದರರನ್ನು ಅಗಲಿದ್ದಾರೆ.
.