ಶೆಟ್ರು ಸಮ್ನೆ ಕುಳಿತುಕೊಳ್ಳುವ ವ್ಯಕ್ತಿಯೇ ಅಲ್ಲ. ಏನಾದರೊಂದು ಮಾಡುತ್ತಿರುತ್ತಾರೆ. ಅದರಲ್ಲೂ ಕಾಂತಾರ ಪಾರ್ಟ್-1 ಹಿಟ್ ಕೊಟ್ಟ ಬಳಿಕವಂತೂ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಸದ್ಯ ಕಾಂತಾರ-2ನಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿದ್ದರೂ ಮತ್ತೊಂದು ಸಿಹಿ ಸಂಗತಿಯನ್ನ ಹೊತ್ತು ತಂದಿದ್ದಾರೆ. ಅದೇನು ಗೊತ್ತಾ?
ರಿಷಬ್ ಶೆಟ್ಟಿ ಸದ್ಯ ಕಾಂತಾರಾ -2 ಮಾಡೋದರಲ್ಲಿ ಬ್ಯುಸಿಯಾಗಿರೋದೇನೋ ನಿಜ ಅದರೊಂದಿಗೆ ಹುಟ್ಟೂರಿನಲ್ಲಿ ‘ಕೆರಾಡಿ ಸ್ಟುಡಿಯೋಸ್’ ನಿರ್ಮಿಸುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಹುಟ್ಟೂರಾದ ಕುಂದಾಪುರದ ಕೆರಾಡಿಯಲ್ಲಿ ಸ್ಟುಡಿಯೋ ನಿರ್ಮಿಸಿದ್ದಾರೆ. ಆ ಮೂಲಕ ಹುಟ್ಟೂರಿನ ಪ್ರತಿಭೆಗಳಿಗೆ ಅವಕಾಶದ ಜೊತೆಗೆ ಕೆಲಸವನ್ನು ನೀಡಲು ಈ ಸಂಸ್ಥೆ ಸ್ಥಾಪಿಸಿದ್ದಾರೆ.
ಅಂದಹಾಗೆಯೇ ಶೆಟ್ರು ಕೆರಾಡಿ ಸ್ಟುಡಿಯೋಸ್ ಸಂಸ್ಥೆ ಅಡಿಯಲ್ಲಿ ಚಿತ್ರಗಳ ಪ್ರಚಾರ, ಮಾರ್ಕೆಂಟಿಗ್ ಕ್ಷೇತ್ರಕ್ಕೆ ಚಿತ್ತ ಹರಿಸಿದ್ದಾರಂತೆ. ಇನ್ಮುಂದೆ ನಟನೆ, ನಿರ್ದೇಶನದ ಜೊತೆಗೆ ಪ್ರಚಾರ ಕಾರ್ಯ, ಮಾರ್ಕೆಟಿಂಗ್ ಜವಾಬ್ದಾರಿಯೂ ನಿರ್ವಹಣೆ ಮಾಡಲು ಯೋಚಿಸಿದ್ದಾರೆ. ಹಾಗಾಗಿ ಸಿನಿಮಾ, ನಟನೆ ಎಂದು ಬೆಂಗಳೂರು ಅರಸಿ ಬರುವವರಿಗೆ ಹುಟ್ಟೂರಲ್ಲಿ ರಿಷಬ್ ಶೆಟ್ಟಿ ಸಂಸ್ಥೆ ಶುರು ಮಾಡಿದ್ದಾರೆ.
ರಿಷಬ್ ಶೆಟ್ಟಿ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಬರೆದು ಹಾಕಿದ್ದಾರೆ. ಹೊಸ ಕನಸು ಮತ್ತು ಹೊಸ ಹೆಜ್ಜೆ ಇಟ್ಟಿದ್ದೇನೆ ಎಂದು ಹೇಳುವ ಮೂಲಕ ಬರೆದುಕೊಂಡಿದ್ದಾರೆ. ಅಂದಹಾಗೆಯೇ ಇವರ ಹೊಸ ಕಾರ್ಯಕ್ಕೆ ಅನೇಕರು ಶುಭವಾಗಲಿ ಎಂದು ಹೇಳಿದ್ದಾರೆ.