ವಿಟ್ಲ : ‘ಸಪ್ತ ವೆಂಚರ್ಸ್’ನ ಅಧೀನದಲ್ಲಿರುವ ವಿಟ್ಲ ಎಂಪಾಯರ್ ಮಾಲ್ನಲ್ಲಿ ಕಾರ್ಯಾಚರಿಸುತ್ತಿದ್ದ ‘ಸಪ್ತ ಜ್ಯುವೆಲ್ಸ್’ ಜೂ.5 ರಂದು ಪುತ್ತೂರು ರಸ್ತೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸ್ಮಾರ್ಟ್ ಸಿಟಿ ಕಮರ್ಷಿಯಲ್ ಕಾಂಪ್ಲೆಕ್ಸ್ ನ ವಿಸ್ತ್ರತ ಮಳಿಗೆಗೆ ಸ್ಥಳಾಂತರಗೊಂಡು ಉದ್ಘಾಟನೆಗೊಳ್ಳಲಿದೆ.
ಉದ್ಘಾಟನಾ ಸಮಾರಂಭದಲ್ಲಿ ವಿಟ್ಲ ಅರಮನೆಯ ಬಂಗಾರು ಅರಸರು ದೀಪ ಪ್ರಜ್ವಲನೆ ಮಾಡಲಿದ್ದಾರೆ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಹಾಗೂ ಮುಳಿಯ ಸಮೂಹ ಸಂಸ್ಥೆಗಳ ಚೇರ್ಮನ್ ಕೇಶವ ಪ್ರಸಾದ್ ಮುಳಿಯ ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ವಿಟ್ಲ ಪೊಲೀಸ್ ಠಾಣೆಯ ನಿರೀಕ್ಷಕರಾದ ಎಚ್.ಇ ನಾಗರಾಜ, ಶ್ರೀ ಚಂದ್ರನಾಥ ದೇವರ ಬಸದಿಯ ಆಡಳಿತದಾರರಾದ ವಿನಯ ಕುಮಾರ್ ಡಿ., ಬಾವಾ ಬ್ಯುಲ್ಡರ್ ನ ಪ್ರೊಮೊಟರ್ ಅಬ್ದುಲ್ ಖಾದರ್ ಬಾವಾ, ವಿಟ್ಲ ಪಟ್ಟಣ ಪಂಚಾಯತ್ ನ ಮುಖ್ಯ ಅಧಿಕಾರಿ ಗೋಪಾಲ ನಾಯಕ್ ರವರು ಆಗಮಿಸಲಿದ್ದಾರೆ.
ಚಿನ್ನಾಭರಣ ಕ್ಷೇತ್ರದಲ್ಲಿ ಅತ್ಯಲ್ಪ ಅವಧಿಯಲ್ಲೇ ಗ್ರಾಮೀಣ ಭಾಗದ ಜನರ ಮನ ಗೆದ್ದ ‘ಸಪ್ತ ಜ್ಯುವೆಲ್ಸ್’ ವಿಶ್ವಾಸನೀಯ ಬೆಲೆಯಲ್ಲಿ ಚಿನ್ನಾಭರಣ ದೊರೆಯುವ ಸಂಸ್ಥೆಯಾಗಿದೆ.
ಎಲ್ಲಾ ವರ್ಗದ ಹಾಗೂ ಎಲ್ಲಾ ಪೀಳಿಗೆಯ ಜನರ ಮನಸ್ಸಿಗೆ ಒಪ್ಪುವಂತಹ ಆಭರಣಗಳ ಬೃಹತ್ ಸಂಗ್ರಹವೇ ಇಲ್ಲಿದ್ದು, 916 ಶುದ್ಧತೆಯ HUIDಹಾಲ್ ಮಾರ್ಕ್ ಹೊಂದಿರುವ ಚಿನ್ನಾಭರಣಗಳ ಮಾರಾಟ ಮಳಿಗೆಯಾಗಿದೆ.
ಸಪ್ತ ಜ್ಯುವೆಲ್ಸ್ ಸಂಸ್ಥೆಯು ಸ್ಥಳಾಂತರಗೊಂಡು ಉದ್ಘಾಟನೆಗೊಳ್ಳುತ್ತಿರುವ ಸಂದರ್ಭದಲ್ಲಿ ತನ್ನ ಗ್ರಾಹಕರಿಗೆ ವಿವಿಧ ಕೊಡುಗೆಗಳನ್ನು ನೀಡಲು ಉದ್ದೇಶಿಸಿದೆ. ಚಿನ್ನಾಭರಣ ಖರೀದಿ ವೇಳೆ ಪ್ರತೀ ಗ್ರಾಂ.ಗೆ 100 ರೂಪಾಯಿ ಕಡಿತ ಹಾಗೂ ಬೆಳ್ಳಿ ಆಭರಣಗಳಲ್ಲಿ 5% ಡಿಸ್ಕಂಟ್ ದೊರೆಯಲಿದೆ. ಗ್ರಾಹಕರಿಗೆ ಪ್ರತೀ 5000 ರೂಪಾಯಿ ಮೌಲ್ಯದ ಚಿನ್ನಾಭರಣ ಖರೀದಿ ವೇಳೆ ಅದೃಷ್ಟ ಚೀಟಿ ನೀಡಲಾಗುವುದು. ಈ ಚೀಟಿಯ ಮುಖಾಂತರ ಒಂದು ಪವನ್ ನ ಚಿನ್ನದ ನೆಕ್ಲಸ್ ಗೆಲ್ಲುವ ಅವಕಾಶವಿದೆ. ಜೂ.30ರ ವರೆಗೆ ಸಂಸ್ಥೆಯಲ್ಲಿ ಚಿನ್ನಾಭರಣದ ಶುದ್ಧತೆಯನ್ನು ಉಚಿತವಾಗಿ ಪರೀಕ್ಷೆ ಮಾಡಿಕೊಡುವ ವ್ಯವಸ್ಥೆಯನ್ನು ಸಂಸ್ಥೆ ಮಾಡಿದೆ.