ವಿಟ್ಲ : ಅಕ್ಷಯ್ ರಜಪೂತ್ ರನ್ನು ಗಡಿಪಾರು ಮಾಡುವಂತೆ ಬಂಟ್ವಾಳ ಡಿವೈಎಸ್ ಪಿ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಕಲ್ಲಡ್ಕ ಬಾಳ್ತಿಲ ನಿವಾಸಿಯಾಗಿರುವ ಅಕ್ಷಯ್ ರಜಪೂತ್ ರನ್ನು ಗಡಿಪಾರು ಮಾಡುವಂತೆ ಬಂಟ್ವಾಳ ಡಿವೈಎಸ್ ಪಿ ಪ್ರಸ್ತಾವನೆ ಸಲ್ಲಿಸಿರುವ ಬಗ್ಗೆ ವರದಿಯಾಗಿದೆ.
ನೋಟೀಸ್ ನಲ್ಲಿ ಏನಿದೆ ..?
ವಿಟ್ಲ ಠಾಣಾ ವ್ಯಾಪ್ತಿಯ ಯುವಕರನ್ನು ಸೇರಿಸಿಕೊಂಡು ಗುಂಪುಗಾರಿಕೆ ನಡೆಸುವುದು, ಹಲ್ಲೆ, ಮತೀಯ ಗಲಭೆಗಳನ್ನು ಸೃಷ್ಟಿಸಲು ಹುನ್ನಾರ ನಡೆಸುವುದು, ಜೀವಬೆದರಿಕೆ ಹಾಕುವುದು, ನೈತಿಕ ಪೊಲೀಸ್ ಗಿರಿಯಂತಹ ಸಮಾಜಘಾತುಕ ಕೃತ್ಯಗಳಲ್ಲಿ ತೊಡಗಿದ್ದು, ವಿಟ್ಲ ಪರಿಸರದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ಉಂಟಾಗಿ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಇದೆ.
ಹಲವು ಬಾರಿ ಠಾಣೆಗೆ ಕರೆದು ಕಾನೂನು ತಿಳುವಳಿಕೆ ನೀಡಿದರೂ ಸಹ ಇವುಗಳನ್ನೆ ಮುಂದುವರಿಸುತ್ತಿದ್ದು, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ನಷ್ಟ ಉಂಟಾಗುವ ಸಾಧ್ಯತೆ ಇರುವುದರಿಂದ ಗಡಿಪಾರು ಮಾಡಿ ಎಂದು ಬಂಟ್ವಾಳ ಠಾಣೆಯ ಅಧೀಕ್ಷರಕರು ಪ್ರಸ್ತಾವನೆ ಸಲ್ಲಿಸಿದ್ದು, ಅ.9 ರಂದು ಸಹಾಯಕ ಆಯುಕ್ತರ ನ್ಯಾಯಾಲಯ ಮಂಗಳೂರು ಉಪವಿಭಾಗಕ್ಕೆ ಹಾಜರಾಗುವಂತೆ ಅಕ್ಷಯ್ ರಜಪೂತ್ಗೆ ನೋಟೀಸ್ ನೀಡಿದ್ದಾರೆ ಎಂಬ ವರದಿಯಾಗಿದೆ..