ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಎಂ.ಬಿ ವಿಶ್ವನಾಥ ರೈ ಯವರನ್ನು ಶಕುಂತಳಾ ಶೆಟ್ಟಿ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹರೀಶ್ ಕುಮಾರ್ ರವರ ಸೂಚನೆಯಂತೆ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ರವರ ಆದೇಶದಂತೆ ಕಾರ್ಯದ್ಯಕ್ಷರಾದ ಸಲೀಂ ಅಹಮದ್ ರವರು ನೇಮಕ ಮಾಡಿದ್ದಾರೆ.
ಆರ್ಯಾಪು ಬೀಡು ಫಾರ್ಮ್ ನಾರಾಯಣ ರೈ ಯವರ ಮಗನಾದ ಎಂ. ಬಿ ವಿಶ್ವನಾಥ ರೈ ಯವರು, ಬಿ.ಕಾಂ.ಪದವೀಧರರಾಗಿದ್ದು, ಬ್ಯಾಂಕ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು, ಸ್ವಯಂ ನಿವೃತ್ತಿಯನ್ನು ಹೊಂದಿರುತ್ತಾರೆ.
ಚಟುಚಟಿಕೆ: ವಿಜಯಾ ಬ್ಯಾಂಕ್ ನೌಕರರ ಸಂಘದ ಮಾಜಿ ಪ್ರಾಂತೀಯ ಕಾರ್ಯದರ್ಶಿ, ಪುತ್ತೂರು ತಾಲೂಕು ಬಂಟರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ, ಜೇಸಿ ವಲಯಾಧ್ಯಕ್ಷ 1993 ಜೇಸಿ ರಾಜ್ಯ ತರಬೇತುದಾರ, ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ 2013, ಸ್ವಾಭಿಮಾನಿ ಸೌಹಾರ್ದ ಸಹಕಾರೀ ನಿರ್ದೇಶಕ, ರಾಮಕೃಷ್ಣ ಪ್ರೌಢಶಾಲೆ ಪುತ್ತೂರು ಇದರ ಮಾಜಿ ಆಡಳಿತ ಮಂಡಳಿ ಸದಸ್ಯ, ರಾಮಕೃಷ್ಣ ಕ್ರೆಡಿಟ್ ಕೋ ಓಪರೇಟಿವ್ ಸೊಸೈಟಿ ಪುತ್ತೂರು ಶಾಖಾ ಸಲಹೆಗಾರ
ಕಾಂಗ್ರೆಸ್ ಪಕ್ಷದಲ್ಲಿ ಜವಾಬ್ದಾರಿ: ಪುತ್ತೂರು ವಿಧಾನಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ., ಪ್ರಸ್ತುತ ಕೆ.ಪಿ.ಸಿ.ಸಿ. ಸದಸ್ಯ, ರಾಜ್ಯಾಧ್ಯಕ್ಷರ ಪದ ಪ್ರಧಾನ ಕಾರ್ಯಕ್ರಮದಲ್ಲಿ ಜಿಲ್ಲೆಯಿಂದ ಕಡಬ ಬ್ಲಾಕ್ ಉಸ್ತುವಾರಿ, ಉದ್ಯೋಗ: ರೈತಭತ್ತದ ಕೃಷಿಯಲ್ಲಿ 2008ರಲ್ಲಿ ಪುತ್ತೂರು ತಾಲೂಕಿಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.