ಮೈಸೂರು: ದಿನೇ ದಿನೇ ಹೆಚ್ಚುತ್ತಿರುವ ಬಿಸಿಲ ಬೇಗೆಗೆ ರಾಜ್ಯದ ಜನರು ಕಂಗಾಲಾಗಿದ್ದಾರೆ. ಬಿಸಿಲಿನ ತಾಪ ತಾಳಲಾರದೆ ಕಂಗೆಟ್ಟಿದ್ದಾರೆ. ಇತ್ತ ಮೈಸೂರಿನಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ರಣ ಬಿಸಿಲಿನಿಂದ ಜನರು ಬಳಲಿ ಬೆಂಡಾಗಿದ್ದಾರೆ. ಹೀಗಾಗಿ 1 ನೇ ತಾರೀಖಿನಿಂದ 5 ರವರೆಗೆ ಮೈಸೂರಿನಲ್ಲಿ ಅರೇಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಶಾಖದ ಅಲೆ ಎಚ್ಚರಿಕೆಯಿಂದ ಈ ಘೋಷಣೆ ಮಾಡಲಾಗಿದೆ.
ಭಾರತದ ಹವಾಮಾನ ಇಲಾಖೆಯು ವಯಸ್ಸಾದವರು, ಮಕ್ಕಳನ್ನು ಬಿಸಿಲಿಗೆ ಕರೆ ತರಬೇಡಿ. 12 ಗಂಟೆಯಿಂದ 3 ಗಂಟೆಯ ವರೆಗೆ ಬಿಸಿಲಲ್ಲಿ ಕೆಲಸ ಮಾಡಬೇಡಿ. ಬಿಸಿಲಿಗೆ ಹೋಗುವ ಮುನ್ನ ಟೋಪಿ, ಕನ್ನಡಕ ಹಾಕಿಕೊಳ್ಳುವಂತೆ ಸೂಚನೆ ನೀಡಿದೆ.