ಹಾಸನ: ರಾಜ್ಯ ನಮ್ಮ ಉಸ್ತುವಾರಿಗಳೇ ಮುಂದಿನ ಎರಡು ವರ್ಷ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಎಂದು ಅರುಣ್ ಸಿಂಗ್ ಹೇಳಿದ್ದಾರೆ. ಅರುಣ್ ಸಿಂಗ್ ಮಾತಿನಿಂದ ನೂರಕ್ಕೆ ನೂರು ಬಲ ಬಂದಿದೆ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಅರುಣ್ ಸಿಂಗ್ ರಾಜ್ಯಕ್ಕೆ ಭೇಟಿ ನೀಡುತ್ತಿರುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ, ಅರುಣ್ ಸಿಂಗ್ ಅವರು ರಾಜ್ಯದ ಇಂಚಾರ್ಜ್ ಇರುವುದರಿಂದ ಬರುತ್ತಾರೆ. ನಾನು ನಿಮಗೆ ಭರವಸೆ ಕೊಡುತ್ತೇನೆ. ಮುಂದಿನ ಉಳಿದಿರುವ ಎರಡು ವರ್ಷ ಮುಖ್ಯಮಂತ್ರಿ ಆಗಿ ಒಳ್ಳೆ ಕೆಲಸ ಮಾಡುವ ಭರವಸೆ ಕೊಡುತ್ತೇನೆ. ಅರುಣ್ ಸಿಂಗ್ ಮಾತಿನಿಂದ ನೂರಕ್ಕೆ ನೂರು ಬಲ ಬಂದಿದೆ. ಪ್ರಧಾನಿಗಳು, ಅಮಿತ್ ಶಾ ಪ್ರೀತಿ ವಿಶ್ವಾಸ ಉಳಿಸಿಕೊಳ್ಳುವ ಕೆಲಸ ಮಾಡುತ್ತೇನೆ. ಮಾಧ್ಯಮದವರು ಸಹಕರಿಸಿ ಎಂದರು.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ನಡೆಯುತ್ತಿದೆ ಎಂಬ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಸಿಎಂ, ನಾನೇ ಮಾಧ್ಯಮದವರಿಗೆ ಒಂದು ಪ್ರಶ್ನೆ ಕೇಳುತ್ತೇನೆ. ಅರುಣ್ ಸಿಂಗ್ ಅವರೇ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ಇಲ್ಲ ಎಂದಿದ್ದಾರೆ. ಅವಧಿ ಪೂರ್ಣ ಎರಡು ವರ್ಷ ಯಡಿಯೂರಪ್ಪ ಅವರೇ ಇರ್ತಾರೆ ಎಂದಿದ್ದು, ಮತ್ತೆ ರಾಜ್ಯದಲ್ಲಿ ನಾಯಕತ್ವದ ಬದಲಾವಣೆಯ ಪ್ರಶ್ನೆಯೇ ಬರೋದಿಲ್ಲ ಎಂದರು.