ಪಳ್ಳಿಗದ್ದೆ-ಕೊಡಂಗಾಯಿಯ ಸಾನಿಧ್ಯ ತರವಾಡು ಮನೆಯಲ್ಲಿ ಶುಕ್ರವಾರ ನಡೆದ ಸಂಕ್ರಮಣ ಕಾರ್ಯಕ್ರಮದ ಅಂಗವಾಗಿ ಕುಟುಂಬದ ಇಬ್ಬರು ಸಾಧಕರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಭಾರತೀಯ ಸೇನೆಯಲ್ಲಿ ಸುಧೀರ್ಘ 24 ವರ್ಷಗಳ ಕಾಲ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತಿ ಹೊಂದಿದ ಕುಟುಂಬದ ಸದಸ್ಯ ಅಶೋಕ್ ನೆಲಪ್ಪಾಲ್ ಅವರನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ಅಭಿನಂದಿಸಲಾಯಿತು. ದೇಶಸೇವೆಯಲ್ಲಿ ಅವರ ಸಮರ್ಪಣೆ ಮತ್ತು ಶ್ರಮವನ್ನು ಕುಟುಂಬದ ಹಿರಿಯರು ಕೊಂಡಾಡಿದರು.
ಅದೇ ರೀತಿ ಕನ್ನಡದ ಜನಪ್ರಿಯ ವಾಹಿನಿ Colors Kannada ಯ ಪ್ರಸಿದ್ಧ ಕಾರ್ಯಕ್ರಮ Gicchi Gili Gili ನಲ್ಲಿ ಭಾಗವಹಿಸಿ ಅನೇಕ ಕನ್ನಡಿಗರ ಅಭಿಮಾನ ಗಳಿಸಿರುವ ಅದ್ವಿಕಾ ಬಾಕಿಲ ಅವರನ್ನೂ ಸನ್ಮಾನಿಸಿ ಶುಭ ಹಾರೈಸಲಾಯಿತು.
ಕಾರ್ಯಕ್ರಮದಲ್ಲಿ ತರವಾಡು ಮನೆಯ ಹಿರಿಯರು, ಕುಟುಂಬಸ್ಥರು ಹಾಗೂ ಬಂಧು-ಬಳಗ ಉಪಸ್ಥಿತರಿದ್ದು, ಸಾಧಕರ ಸಾಧನೆಯನ್ನು ಮೆಚ್ಚಿ ಅಭಿನಂದಿಸಿದರು. ಸಂಕ್ರಮಣದ ಸಾಂಪ್ರದಾಯಿಕ ಆಚರಣೆಗಳ ನಡುವೆ ನಡೆದ ಈ ಸನ್ಮಾನ ಕಾರ್ಯಕ್ರಮವು ವಿಶೇಷ ಮೆರುಗು ತಂದಿತು.



























