ಪುತ್ತೂರು : ಸಂಸ್ಕಾರ ಸಂಘಟನೆ, ಸೇವೆ ಎಂಬ ತ್ರಿಮಂತ್ರಗಳಿಂದ ಕಳೆದ 46 ವರ್ಷಗಳಿದ ಉಚಿತ ಯೋಗ ವಿದ್ಯೆಯನ್ನು ಸಮಾಜಕ್ಕೆ ನೀಡುತ್ತಿರುವ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ವತಿಯಿಂದ ವಿವೇಕಾನಂದ ವಿದ್ಯಾವರ್ಧಕ ಆಂಗ್ಲ ಮಾಧ್ಯಮದ ಅಡಿಟೋರಿಯಂನಲ್ಲಿ 12 ನೇ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ಜೂ.21ರಂದು ವಿಜ್ರಂಭಣೆಯಿಂದ ಬೆಳಗ್ಗಿನ ಬ್ರಾಹ್ಮೀ ಮುಹೂರ್ತದಲ್ಲಿ ಸಮಯ 4:30 ರಿಂದ 6:30ಯವರೆಗೆ ಕಾರ್ಯಕ್ರಮವು ನೆರವೇರಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವ್ಯವಸ್ಥಾಪಕ ಸಂಚಾಲಕರು ಆಗಿರುವ ರವಿ ನಾರಾಯಣರವರು ಮಾತನಾಡಿ ಯೋಗವು ಸಂಜೀವಿನಿ ಇದ್ದಂತೆ, ಇದನ್ನು ನಿತ್ಯ ಜೀವನದಲ್ಲಿ ಅವಿಭಾಜ್ಯ ಅಂಗದಂತೆ ಅಳವಡಿಸಿಕೊಂಡು ನಿತ್ಯ ನಿರಂತರವಾಗಿ ಅಭ್ಯಾಸ ಮಾಡಿದಾಗ ಮಾತ್ರ ಆರೋಗ್ಯ ಭಾಗ್ಯ ಎಂದು ಹೇಳಿದರು
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರು ಆಗಿರುವ ಶ್ರೀಯುತ ಸತೀಶ್ ರೈರವರು ಮಾತನಾಡಿ ಯೋಗ ದಿನಾಚರಣೆಗೆ ಶುಭಹಾರೈಸಿದರು. ನೇತ್ರಾವತಿ ವಲಯ ಶಿಕ್ಷಣ ಪ್ರಮುಖರು ಆಗಿರುವ ಗಣೇಶ, ಜಿಲ್ಲಾ ಸಹ ಸಂಚಾಲಕರಾದ ಶ್ರೀಯುತ ಯೋಗೀಶ್ ,ತಾಲೂಕು ಸಂಚಾಲಕರಾದ ಕೃಷ್ಣಾನಂದ ಇಂದಿನ ಕಾರ್ಯಕ್ರಮದ ಸಂಚಾಲಕರಾದ ಸತೀಶ್ ಸುವರ್ಣ, ಸಹಸಂಚಾಲಕರಾದ ಮುರಳಿಧರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆರಂಭದಲ್ಲಿ ಭಜನೆಯನ್ನು ಕೋಲ್ಪೆ ಶಾಖೆ ಮತ್ತು ಸಂಪ್ಯ ಶಾಖೆ ಯೋಗ ಬಂಧುಗಳ ತಂಡದವರು ಸುಮಧುರವಾದ ದೇವರ ನಾಮಗಳೊಂದಿಗೆ ನಡೆಸಿಕೊಟ್ಟರು.
ಬಳಿಕ ಮಾನಸಿಕ ಸಿದ್ಧತೆ ಉಸಿರಾಟ ಕ್ರಿಯೆ ಗಣಪತಿ ಯೋಗ ನಮಸ್ಕಾರವನ್ನು ಶಿಕ್ಷಕರಾದ ಸೃಷ್ಟಿ ನಡೆಸಿಕೊಟ್ಟರು. ಅವರ ಜೊತೆ ಸಹ ಶಿಕ್ಷಕರಾಗಿ ವಿಶ್ವನಾಥ , ಉಮಾವತಿ , ಜಗದೀಶ್ , ರೇಖಾ ಪ್ರಭು ಪ್ರಾತ್ಯಕ್ಷಿಕೆ ನೀಡಿದರು.
ಶಿಕ್ಷಕರಾದ ರಾಜಗೋಪಾಲ್ ರವರು 12ನೆಯ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದ ಬೌದ್ಧಿಕ್ ಅವಧಿಯನ್ನು ಅದ್ಭುತವಾಗಿ ನಡೆಸಿಕೊಟ್ಟರು.
ಮುಂದೆ ಆಯುಷ್ ಪಠ್ಯ ಇಲಾಖೆಯ ಕ್ರಮದಂತೆ ಯೋಗಾಭ್ಯಾಸವನ್ನು ಶಿಕ್ಷಕರಾದ ದಿವ್ಯ ನಡೆಸಿಕೊಟ್ಟರು. ಸಹ ಶಿಕ್ಷಕರಾದ ಕೇಶವ , ಸುಮ , ರಮೇಶ ,ದಿವ್ಯ ಪ್ರಾತ್ಯಕ್ಷಿಕೆ ನೀಡಿದರು.
ತದನಂತರ ಅಮೃತಾಸನದೊಂದಿಗೆ ಈ ದಿನ ವಿಶೇಷವಾಗಿ ವಿಶ್ವ ಯೋಗ ದಿನವಾದ ಇಂದು ಪ್ರಾಣಾಯಾಮದೊಂದಿಗೆ ಧ್ಯಾನವನ್ನು ಮಾಡಲಾಯಿತು.
ಈ ಅಪೂತಪೂರ್ವ ಕಾರ್ಯಕ್ರಮಕ್ಕೆ ಪುತ್ತೂರು ಹಾಗೂ ವಿಟ್ಲ ಭಾಗದ ಯೋಗ ಬಂಧುಗಳು 1000 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಶ್ರದ್ಧೆಯಿಂದ ಶಿಸ್ತಿನಿಂದ ಸಮಯಕ್ಕೆ ಸರಿಯಾಗಿ ಪಾಲ್ಗೊಂಡು ಕಾರ್ಯಕ್ರಮ ಅದ್ಭುತವಾಗಿ ವನಮೋಹಕವಾದ ರೀತಿಯಲ್ಲಿ ಸುಂದರವಾಗಿ ಮೂಡಿ ಬಂತು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಚಿಂತನ ಕೂಟ ಹಾಗೂ ಪ್ರಶಿಕ್ಷಣ ಪ್ರಮುಖರಾದ ಹರೀಶ್ ಆಂಚನ್ , ಜಿಲ್ಲಾ ಸಂಘಟನಾ ಪ್ರಮುಖರಾದ ಹರಿಪ್ರಸಾದ್, ಬಾಲಕೃಷ್ಣ, ತಾಲೂಕು ವಿಸ್ತರಣಾ ಪ್ರಮುಖರಾದ ಪುಷ್ಪರಾಜ್, ತಾಲೂಕು ಸಹ ಸಂಚಾಲಕರಾದ ವೀಣಾ ಹಾಗೂ ವಿಟ್ಲ ನಗರ ಸಂಚಾಲಕರಾದ ಪ್ರಕಾಶ್ ಅಣ್ಣಡ್ಕ ಹಾಗೂ ಜಿಲ್ಲಾ ಸಹಸಂಚಾಲಕಿ ಮಾಧುರಿ ಉಪಸ್ಥಿತರಿದ್ದರು.
ಕೊನೆಯ ಅವಧಿಗೆ ಅನ್ನಪೂರ್ಣೇಶ್ವರಿ ಮಂತ್ರ ಹಾಗೂ ಲೋಕಕಲ್ಯಾಣ ಮಂತ್ರದೊಂದಿಗೆ ಕಾರ್ಯಕ್ರಮವು ಸುಂದರವಾಗಿ ಸಂಪನ್ನಗೊಂಡು ಸುವ್ಯವಸ್ಥಿತವಾಗಿ ಪ್ರಸಾದದ ವ್ಯವಸ್ಥೆಯು ನಡೆಯಿತು.
ಪವಿತ್ರ ಸ್ವಾಗತಿಸಿ, ವಂದನಾರ್ಪಣೆಯನ್ನು ಕಾರ್ಯಕ್ರಮ ಸಂಚಾಲಕ ಸತೀಶ್ ಸುವರ್ಣ ನಿರ್ವಹಿಸಿ, ಶರಣ್ಯ ನಿರೂಪಣೆಗೈದರು.



























