ಪುತ್ತೂರಿನಲ್ಲಿ ಕೇಂದ್ರ ಕಛೇರಿಯನ್ನು ಹೊಂದಿ ರಾಜ್ಯಾದ್ಯಂತ 21 ಶಾಖೆಗಳೊಂದಿಗೆ ಯಶಸ್ವಿಯಾಗಿ ಕಾರ್ಯಾಚರಿಸುತ್ತಿರುವ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 22ನೇ
ಶಾಖೆಯು ದಿನಾಂಕ 15-07-2026ರಂದು ನೆಲ ಮಹಡಿ ನಿಕ್ಸೋನ್ಸ್ ಫ್ಲಾಝ, ಉಳ್ಳಾಲದಲ್ಲಿ ಶುಭಾರಂಭಗೊಳ್ಳಲಿದೆ.
ನೂತನ ಶಾಖೆಯನ್ನು ಸನ್ಮಾನ್ಯ ಯು ಟಿ ಖಾದರ್ ಫರೀದ್, ಮಾನ್ಯ ಸಚಿವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕರ್ನಾಟಕ ಸರಕಾರ ಇವರ ಸಭಾಧ್ಯಕ್ಷತೆಯಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಇವರು ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿವಂದನೀಯ ಫಾದರ್ ಆಂಡ್ರ್ಯೂ ಲಿಯೊ ಡಿಸೋಜ, ಧರ್ಮಗುರುಗಳು, ಸಂತ ಸೆಬಾಸ್ಟಿಯನ್ ಚರ್ಚ್, ಪೆರ್ಮನ್ನೂರು, ತೊಕ್ಕೊಟ್ಟು, ಶ್ರೀ ಗೋಕುಲದಾಸ್ ನಾಯಕ್, ಜಂಟಿ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಮಂಗಳೂರು, ಶ್ರೀ ಸಂತೋಷ್ ಎಸ್ ಡಿ, ನಗರಸಭಾ ಪೌರಾಯುಕ್ತರು, ಉಳ್ಳಾಲ, ಶ್ರೀಮತಿ ಭಾರತಿ ಜಿ ಭಟ್, ನಿರ್ದೇಶಕರು, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ಬೆಂಗಳೂರು, ಶ್ರೀಮತಿ ಜೋಶ್ನಾ ಕೆ, ಮಾಲಕರು, ನಿಕ್ಸೋನ್ಸ್ ಫ್ಲಾಝ ಉಳ್ಳಾಲ ಇವರು ಭಾಗವಹಿಸಲಿದ್ದಾರೆ.
2001ರಲ್ಲಿ ಕಾರ್ಯಾರಂಭಗೊಂಡ ಸಹಕಾರಿಯು ಪ್ರಸಕ್ತ ರಜತ ಮಹೋತ್ಸವ ವರ್ಷಾಚರಣೆ ಮಾಡುತ್ತಿದೆ. ಸಹಕಾರಿಯು ಆಕರ್ಷಕ ಬಡ್ಡಿದರದಲ್ಲಿ ಠೇವಣಿ ಸ್ವೀಕಾರ, ವಿವಿಧ ಉದ್ದೇಶದ
ಸಾಲಗಳು, ಜೀವವಿಮೆ ಹಾಗೂ ಸಾಮಾನ್ಯ ವಿಮೆಗಳು, ಪಾನ್ ಕಾರ್ಡ್, ಸೇಫ್ಲಾಕರ್ ಸೌಲಭ್ಯವನ್ನು ಸದಸ್ಯರಿಗೆ ನೀಡುತ್ತಿದೆ. ಸಹಕಾರಿಯು ಆರಂಭದಿಂದಲೂ ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿದ್ದು
ದಿನಾಂಕ 30-06-2026 ರಂತೆ 53034 ಸದಸ್ಯರನ್ನು ಹೊಂದಿದ್ದು ರೂ. 426 ಕೋಟಿ ಠೇವಣಾತಿಯನ್ನು ಸಂಗ್ರಹಿಸಿ ರೂ. 402 ಕೋಟಿ ಸಾಲ ವಿತರಿಸಿ ರೂ 828ಕೋಟಿ ವ್ಯವಹಾರವನ್ನು
ದಾಖಲಿಸಿದೆ. 2026 ಮಾರ್ಚ್ ವರ್ಷಾಂತ್ಯಕ್ಕೆ ರೂ.7.27ಕೋಟಿ ನಿವ್ವಳ ಲಾಭ ಗಳಿಸಿರುತ್ತದೆ.
2025-26ನೇ ಸಾಲಿನಲ್ಲಿ ಶೇ 13% ಡಿವಿಡೆಂಡ್ ವಿತರಿಸಲಾಗಿದೆ. ನಗುಮೊಗದ ತ್ವರಿತ ಹಾಗೂ ಗ್ರಾಹಕ ಸ್ನೇಹೀ ಸೇವೆಗೆ ಹೆಸರಾದ ಸಹಕಾರಿಯಲ್ಲಿ ಪ್ರಸ್ತುತ 119 ಜನ ಸಿಬ್ಬಂದಿಗಳು ಸದಸ್ಯರ
ಸೇವೆಯಲ್ಲಿ ನಿರತರಾಗಿದ್ದಾರೆ. ಸಹಕಾರಿಯು ಕೇವಲ ಆರ್ಥಿಕ ಕ್ಷೇತ್ರದಲ್ಲಿ ಮಾತ್ರವಲ್ಲದೆ ಸಾಮಾಜಿಕ ಸೇವಾ ಕಾರ್ಯದ ಭಾಗವಾಗಿ 2015ರಲ್ಲಿ ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ನ್ನು ಸ್ಥಾಪಿಸಿ ಇದರ ಮೂಲಕ ಆಶಕ್ತರಿಗೆ ಆರ್ಥಿಕ ನೆರವು, ವಿವಿಧ ಪುಸ್ತಕಗಳ ಬಿಡುಗಡೆ, ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳು, ಉಚಿತ ಆರೋಗ್ಯ ತಪಾಸಣಾ ಶಿಬಿರ, ಬಟ್ಟೆಯ ಕೈಚೀಲ ವಿತರಣೆ, ತರಕಾರಿ ಬೀಜ ವಿತರಣೆ, ಆರೋಗ್ಯ ಮಾಹಿತಿ ಶಿಬಿರ, ಶಾಲಾ ಕಾಲೇಜುಗಳಿಗೆ ವಿವಿಧ ಕೊಡುಗೆಗಳು, ಮಾಹಿತಿ ಕಾರ್ಯಾಗಾರಗಳು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು ಈ ವರೆಗೆ ಸುಮಾರು 2 ಕೋಟಿಗೂ ಮಿಕ್ಕಿ ವೆಚ್ಚದ ಸೇವಾ ಕಾರ್ಯಗಳನ್ನು ನಡೆಸಿರುತ್ತದೆ. ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆಯಲ್ಲಿ ಸಹಕಾರಿಯ ಮತ್ತೊಂದು ಶಾಖೆಯು ಶೀಘ್ರದಲ್ಲಿ ಆರಂಭಗೊಳ್ಳಲಿರುವುದು.
ಸದಸ್ಯರು ನೂತನ ಶಾಖೆಗಳಲ್ಲಿ ತಮ್ಮ ವ್ಯವಹಾರವನ್ನು ನಡೆಸಿ ಸಹಕಾರಿಯ ಪ್ರಗತಿಗೆ ಕೈಜೋಡಿಸುವಂತೆ ಸಹಕಾರಿಯ ಅಧ್ಯಕ್ಷರಾದ ಶ್ರೀ ಎಸ್ ಆರ್ ಸತೀಶ್ಚಂದ್ರ ಅವರು ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.

























