ಸುಳ್ಯ : ಭಾರತೀಯ ಜನಸಂಘದ ಸ್ಥಾಪಕ ಅಧ್ಯಕ್ಷರಾದ ಡಾಕ್ಟರ್ ಶ್ಯಾಮಪ್ರಸಾದ ಮುಖರ್ಜಿ ಅವರ ಸ್ಮರಣೆಗಾಗಿ ವೃಕ್ಷಾರೋಪಣ ಕಾರ್ಯಕ್ರಮ ಪ್ರಯುಕ್ತ ಇಂದು ಸುಳ್ಯ ಮಂಡಲಕ್ಕೆ ಜಿಲ್ಲಾ ಪ್ರಮುಖರ ತಂಡ ಭೇಟಿ ನೀಡಿತ್ತು ಪಾಲ್ತಾಡಿ ಗ್ರಾಮದ ಬೂತ್ ಸಂಖ್ಯೆ 70 ರಲ್ಲಿ ಗಿಡನೆಡುವ ಕಾರ್ಯಕ್ರಮ ಜರಗಿತು ಹಾಗೂ ಬಿಜೆಪಿ ಪ್ರಮುಖರ ಮತ್ತು ಕಾರ್ಯಕರ್ತರ ಜೊತೆ ತಂಡ ಸಭೆ ನಡೆಸಿತು.
ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ವೃಕ್ಷಾರೋಪಣ ಪ್ರಮುಖರು, ಮೈಸೂರು ಪೈಂಟ್ಸ್ ಮತ್ತು ವಾರ್ನಿಷ್ ನಿಗಮದ ಅಧ್ಯಕ್ಷ ಎನ್ ವಿ ಪಣೀಶ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ ಉಪಾಧ್ಯಕ್ಷರಾದ ಬೂಡಿಯಾರು ರಾಧಾಕೃಷ್ಣ ರೈ, ಪ್ರಮುಖರಾದ ವಸಂತ ಅಣ್ಣಲಿಕೆ ತಂಡದಲ್ಲಿದ್ದರು. ಸುಳ್ಯ ಮಂಡಲ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ ಅಧ್ಯಕ್ಷತೆ ವಹಿಸಿದ್ದರು ಹಿರಿಯರಾದ ರಮೇಶ್ ಬಿ ಕೆ, ಪ್ರಧಾನ ಕಾರ್ಯದರ್ಶಿಗಳಾದ ರಾಕೇಶ್ ರೈ ಕೆಡೆಂಜಿ , ಸುಭೋದ್ ಶೆಟ್ಟಿ ಮೇನಾಲ, ಕಾರ್ಯದರ್ಶಿಗಳಾದ ಇಂದಿರಾ ಬಿ ಕೆ, ಶ್ರೀನಾಥ್ ರೈ ಬಾಳೀಲ ಅಧ್ಯಕ್ಷರಾದ ಅನ್ನಪೂರ್ಣ ಪ್ರಸಾದ್ ಮಹಾಶಕ್ತಿ ಬಾಳೀಲ, ಮಹಾಶಕ್ತಿಕೇಂದ್ರ ಅಧ್ಯಕ್ಷ ಗಣೇಶ್ ಉದನಡ್ಕ ,ಮಂಡಲದ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸುನಿಲ್ ಕೆರ್ಪಳ ಶಕ್ತಿಕೇಂದ್ರ ಪ್ರಮುಖರು ಬೂತ್ ಸಮಿತಿಯ ಪದಾಧಿಕಾರಿಗಳು ಗ್ರಾಮ ಪಂಚಾಯತ್ ಸದಸ್ಯರುಗಳು ಉಪಸ್ಥಿತರಿದ್ದರು.