ಪುತ್ತೂರು : ಆಕ್ಟಿವಾದಲ್ಲಿ ತೆರಳುತ್ತಿದ್ದ ವೇಳೆ ಹಿಂಭಾಗದ ಟಯರ್ ಸ್ಫೋಟಗೊಂಡು ಆಕ್ಟಿವಾ ಚಾಲಕ ಉರಗ ತಜ್ಞ ಬನ್ನೂರು ನಿವಾಸಿ ತೇಜಸ್ ಗಾಯಗೊಂಡ ಘಟನೆ ಜು.12 ರಂದು ನಡೆದಿದೆ.
![](https://zoomintv.online/wp-content/uploads/2021/07/WhatsApp-Image-2021-07-14-at-3.53.20-PM.jpeg)
ಸ್ನೇಕ್ ತೇಜಸ್ ಎಂದೇ ಹೆಸರು ಪಡೆದ ಉರಗ ತಜ್ಞ ತೇಜಸ್ ಬೈಪಾಸ್ ರಸ್ತೆ ಯಲ್ಲಿ ಚಲಿಸುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಹಾವುಗಳನ್ನು ಹಿಡಿದು ಅವುಗಳನ್ನು ರಕ್ಷಿತಾರಣ್ಯಕ್ಕೆ ಬಿಡುವುದರ ಮೂಲಕ ಅವುಗಳ ಪ್ರಾಣ ರಕ್ಷಣೆ ಮಾಡುವ ಹವ್ಯಾಸ ಹೊಂದಿರುವ ಇವರು ಸ್ನೇಕ್ ತೇಜಸ್ ಎಂದೇ ಪ್ರಖ್ಯಾತಿ ಪಡೆದಿದ್ದಾರೆ.