ಪುತ್ತೂರು : ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ ನಿಯಮಿತದ ನೂತನ ಯೋಜನೆಯಂತೆ ಪುತ್ತೂರು, ಕಡಬ, ಸುಳ್ಯದಲ್ಲಿ ವಿದ್ಯುತ್ ರಹಿತ ಮನೆಗಳ ಕುರಿತಂತೆ ವಿವರಗಳನ್ನು ನೀಡಿ, ಈ ಮೂಲಕ ವಿದ್ಯುತ್ ಸೌಕರ್ಯ ಕಲ್ಪಿಸಿಕೊಡುವ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಪುತ್ತೂರಿನ ಯಶಸ್ವಿ ಉದ್ಯಮಿ, ಪದ್ಮಶ್ರೀ ಸೋಲಾರ್ ಮಾಲಕ ಸೀತಾರಾಮ ರೈ ಕೆದಂಬಾಡಿಗುತ್ತು ಕೂಡಾ ಜ್ಞಾನ ದೀವಿಗೆ ಎನ್ನುವ ನಿಲುವಿನಡಿ ವಿದ್ಯುತ್ ಸಂಪರ್ಕ ಇಲ್ಲದೆ ಅಂಧಕಾರದಲ್ಲಿ ಜೀವನ ಕಳೆಯುತ್ತಿರುವ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಮನೆಗಳನ್ನು ಗುರುತಿಸಿ ಸೋಲಾರ್ ವಿದ್ಯುತ್ ಬೆಳಕಿನ ವ್ಯವಸ್ಥೆ ಮಾಡಿಕೊಡುತ್ತಿದ್ದಾರೆ. ಪುತ್ತೂರು ಭಾಗದ ವಿದ್ಯುತ್ ಸಂಪರ್ಕ ರಹಿತ ಮನೆಗಳನ್ನೂ ಗುರುತಿಸಿ ಮನೆ ಮನವನ್ನು ತನ್ಮೂಲಕ ಪ್ರಕಾಶಮಾನಗೊಳಿಸುವ ಯೋಜನೆಯನ್ನು ಸಾಕಾರಗೊಳಿಸುತ್ತಿದ್ದಾರೆ.
ಘನ ಸರ್ಕಾರವು ಎಲ್ಲರಿಗೂ ಮೂಲಭೂತ ಸೌಕರ್ಯ ಕಲ್ಪಿಸಲು ವಿದ್ಯುತ್ ರಹಿತ ಮನೆಗಳನ್ನು ತಾಲೂಕು ವ್ಯಾಪ್ತಿಯಲ್ಲಿ ಗುರುತಿಸಿ ಗ್ರಾಮ ಪಂಚಾಯಿತಿ ಈ ಪಟ್ಟಿಯನ್ನು ದಾಖಲೆಗಳೊಂದಿಗೆ ಒದಗಿಸಿಕೊಡಬೇಕೆನ್ನುವ ಆದೇಶವನ್ನು ಹೊರಡಿಸಿದೆ. ಆದರೆ ಈ ಮೊದಲೇ ಸೀತಾರಾಮ ರೈ ಕೆದಂಬಾಡಿಗುತ್ತು ಈ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ಧಾರೆ.. ತನ್ನ ಸಂಸ್ಥೆಯ ಮುಖೇನ ವಿದ್ಯುತ್ ಸಂಪರ್ಕವೇ ಇಲ್ಲದ ಮನೆಗೆ ಸೋಲಾರ್ ವ್ಯವಸ್ಥೆಯನ್ನು ಸ್ವತಃ ತಮ್ಮದೇ ಸ್ವಂತ ಖರ್ಚಿನಲ್ಲಿ ಒದಗಿಸಿಕೊಡುತ್ತಿದ್ದಾರೆ.
ಸರ್ಕಾರದ ಮಹೋನ್ನತ ಯೋಚನೆಗೆ ಇಂತಹ ಸಾಮಾಜಿಕ ಸೇವಾಕರ್ತರ ಪೂರ್ವತಯಾರಿಯನ್ನು ಗಮನಿಸಬಹುದಾಗಿದೆ.