ಪುತ್ತೂರು: ನರಿಮೊಗರು ವಲಯ ಕಾಂಗ್ರೆಸ್ ಯಂಗ್ ಬ್ರಿಗೇಡ್ ಸೇವಾದಳದ ಅಧ್ಯಕ್ಷರಾಗಿ ಜಮಾಲ್ ಪುರುಷರಕಟ್ಟೆ, ಮತ್ತು ಕಾರ್ಯದರ್ಶಿಯಾಗಿ ರಾಘವೇಂದ್ರ ಮುಕ್ವೆ ಆಯ್ಕೆಗೊಂಡಿದ್ದಾರೆ.
ನರಿಮೊಗರು ವಲಯ ಕಾಂಗ್ರೆಸ್ ಅಧ್ಯಕ್ಷರಾದ ಪ್ರಕಾಶ್ ಪುರುಷರಕಟ್ಟೆ ಮತ್ತು ನರಿಮೊಗರು ವಲಯ ಕಾಂಗ್ರೆಸ್ ಉಸ್ತುವಾರಿಗಳೂ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಸಚಿನ್ ಸರೋಳಿಯವರ ಸೂಚನೆಯಂತೆ ಮತ್ತು ಪುತ್ತೂರಿನ ಮಾಜಿ ಶಾಸಕರಾದ ಶಕುಂತಳಾ ಶೆಟ್ಟಿ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಯಂ.ಬಿ ವಿಶ್ವನಾಥ ರೈ ಯವರ ಶಿಫಾರಸ್ಸಿನಂತೆ ಪುತ್ತೂರು ಯಂಗ್ ಬ್ರಿಗೇಡ್ ಸೇವಾದಳದ ಅಧ್ಯಕ್ಷರಾದ ರಂಜಿತ್ ಬಂಗೇರಾ ಮತ್ತು ಅಭಿಷೇಕ ಬೆಳ್ಳಿಪ್ಪಾಡಿಯವರು ನೇಮಕ ಮಾಡಿದ್ದಾರೆ.
ನರಿಮೊಗರು ವಲಯದ ವ್ಯಾಪ್ತಿಯಲ್ಲಿ ಯುವಕರನ್ನು ಸಂಘಟಿಸುವ ಮೂಲಕ ಯುವ ಜನಾಂಗಕ್ಕೆ ಯಂಗ್ ಬ್ರಿಗೇಡ್ ಸೇವಾದಳ ಮಾದರಿಯಾಗಬೇಕು ಇದನ್ನು ನೂತನವಾಗಿ ನೇಮಕವಾದ ಪದಾಧಿಕಾರಿಗಳು ನಡೆಸಿಕೊಡುತ್ತಾರೆ ಎಂಬ ನಂಬಿಕೆ ಇದೆ ಎಂದು ರಂಜಿತ್ ಬಂಗೇರಾ ತಿಳಿಸಿದರು.
ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮಗಳಲ್ಲಿ ಯಂಗ್ ಬ್ರಿಗೇಡ್ ಸೇವಾದಳದ ಘಟಕ ಆರಂಭ ಮಾಡುವ ಮೂಲಕ ಯುವಕರಿಗೆ ರಾಜಕೀಯವಾಗಿ ತೊಡಗಿಕೊಳ್ಳುವ ಮೂಲಕ ಸೇವಾದಳದ ಘೋಷ ವಾಕ್ಯವಾದ ಜನಸೇವೆಗೆ ಅವಕಾಶ ನೀಡಲಾಗುವುದು ಎಂದು ಅಭಿಷೇಕ್ ಬೆಳ್ಳಿಪ್ಪಾಡಿ ತಿಳಿಸಿದರು.
ಈ ಸಂದರ್ಭದಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಯಂ.ಬಿ ವಿಶ್ವನಾಥ ರೈ ,ನಗರಸಭೆ ಸದಸ್ಯರಾದ ರಿಯಾಝ್ ಪರ್ಲಡ್ಕ ಮತ್ತು ಶರೀಪ್ ಬಲ್ನಾಡು,ಪ್ರಕಾಶ್ ಪುರುಷರಕಟ್ಟೆ ಉಪಸ್ಥಿತರಿದ್ದರು.