ವಿಟ್ಲ: ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ (ರಿ) ಕಾನತ್ತಡ್ಕ ವಿಟ್ಲ ಮತ್ತು ಶ್ರೀ ವಿಶ್ವಕರ್ಮ ತರವಾಡು ಆಚಾರಿ ಮೂಲೆ ಎರುಂಬು ಇದರ ಮಾರ್ಗದರ್ಶಕರಾಗಿದ್ದ ಗಣಪತಿ ಆಚಾರ್ಯ ಕಾನತ್ತಡ್ಕ (88) ತಮ್ಮ ಸ್ವಗೃಹದಲ್ಲಿ ಆ.23 ರಂದು ನಿಧನರಾದರು.
ಗಣಪತಿ ಆಚಾರ್ಯ ರವರು ಕಾನತ್ತಡ್ಕ ಶ್ರೀ ವಿಶ್ವಕರ್ಮ ಸಂಘ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸುದರ ಜೊತೆಗೆ ಸಮುದಾಯ ಭವನ ನಿರ್ಮಾಣಕ್ಕೆ ಸ್ಥಳ ದಾನ ಮಾಡಿ ಸದಾ ಸಂಘದ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಮೃತರು ಪತ್ನಿ, ಓರ್ವ ಪುತ್ರ. ಓರ್ವ ಪುತ್ರಿ, ಸೊಸೆ, ಅಳಿಯ ಮೊಮ್ಮಕ್ಕಳನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.