ಬಂಟ್ವಾಳ: ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದ ಅರ್ಚಕರಾದಂತಹ ಪ್ರಕಾಶ್ ಭಟ್ ರವರು ಆ.23 ರಂದು ಹೃದಯಾಘಾತದಿಂದಾಗಿ ನಿಧನರಾದರು.
ಪ್ರಕಾಶ್ ಭಟ್ ರವರ ಮಗಳ ವಿವಾಹವೂ ನಿನ್ನೆ ತಾನೇ ನೆರವೇರಿದ್ದು, ಇಂದು ಆರತಕ್ಷತೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಮಧ್ಯಾಹ್ನ ಊಟ ಮಾಡಿದ ನಂತರ ಕೈ ತೊಳೆಯುವ ಸಂದರ್ಭದಲ್ಲಿ ವಿಪರೀತ ಆಯಾಸವಾಗುತ್ತಿದ್ದೆ ಎಂದರು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆಸ್ಪತ್ರೆ ತಲುಪುವಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು ಎಂದು ತಿಳಿದು ಬಂದಿದೆ.
ಮೃತರು ಪತ್ನಿ, ಮೂರು ಹೆಣ್ಣು ಮಕ್ಕಳು ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.
ಪ್ರಕಾಶ್ ಭಟ್ ರವರ ಡಿಢೀರ್ ಸಾವಿನಿಂದಾಗಿ ಮದುವೆಯ ಸಂಭ್ರಮದಲ್ಲಿರಬೇಕಾದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.