ಪುತ್ತೂರು: ಗ್ರಾಮ ಪಂಚಾಯತ್ ಕಚೇರಿಯ ಸುತ್ತಮುತ್ತ ಗಡಿ ಗುರುತು ನಡೆಸಿ ಜೆಸಿಬಿ ಮೂಲಕ ಅಗಲು ನಿರ್ಮಿಸುತ್ತಿದ್ದ ವೇಳೆ ನೆರೆಯ ಮನೆಯ ನಿವಾಸಿಗಳಾದ ತಾಲೂಕ್ ಪಂಚಾಯತ್ ಮಾಜಿ ಸದಸ್ಯೆ ಲೀಲಾವತಿ ಲಕ್ಷ್ಮಣ ಗೌಡ ಮತ್ತು ಅವರ ಮನೆಯವರು ಜೆಸಿಬಿ ಮೇಲೆ ಹತ್ತಿ ಪ್ರತಿಭಟನೆ ನಡೆಸಿ ಅಗಲು ಮಾಡುವ ಕಾರ್ಯಕ್ಕೆ ಅಡ್ಡಿ ಪಡಿಸಿದ ಹಾಗೂ ಬಿಜೆಪಿ ಮಾಜಿ ನಾಯಕಿ ಲೀಲಾವತಿ ಲಕ್ಷ್ಮಣ ಗೌಡ ಮತ್ತವರ ಬಳಗದ ವಿರುದ್ಧ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಪೊಲೀಸರಿಗೆ ದೂರು ನೀಡಿದಾಗ ಕಾಂಗ್ರೆಸ್ ಮುಖಂಡರ ನಿಯೋಗ ಭೇಟಿ ನೀಡಿ ಮನವಿ ಮಾಡಿದ ಹಿನ್ನೆಲೆಯಲ್ಲಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಆಡಳಿತ ಮಂಡಳಿಯವರು ದೂರು ವಾಪಾಸ್ ಪಡೆದುಕೊಂಡು ಪಂಚಾಯತ್ ಕಚೇರಿ ಸುತ್ತ ಅಗಲು ನಿರ್ಮಿಸುವ ಕಾರ್ಯ ಮುಂದುವರಿಸಿರುವ ಘಟನೆ ಕೋಡಿಂಬಾಡಿಯಲ್ಲಿ ನಡೆದಿತ್ತು, ಈ ನಿಟ್ಟಿನಲ್ಲಿ ಸಂತ್ರಸ್ತ ಬಿಜೆಪಿ ಮುಖಂಡೆ ಲೀಲಾವತಿ ಯವರು ಮನೆಗೆ ಕಾಂಗ್ರೆಸ್ ನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿಯವರು ಭೇಟಿ ನೀಡಿದರು.
ಈ ಸಂದರ್ಭದಲ್ಲಿ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಜರಾಮ್ ಕೆ.ಬಿ, ಪ್ರಧಾನ ಕಾರ್ಯದರ್ಶಿ ಹಾಗೂ ಕೋಡಿಂಬಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಜಗನ್ನಾಥ ಶೆಟ್ಟಿ ನಡುಮನೆ, ಜಿಲ್ಲಾ ಕಾಂಗ್ರೆಸ್ ಮುಖಂಡರು ಉಮಾನಾಥ ಶೆಟ್ಟಿ ಪೆರ್ನೆ, ಪುತ್ತೂರು ತಾಲೂಕು ಇಂಟಕ್ ಅಧ್ಯಕ್ಷರು ಹಾಗೂ ಪಂಚಾಯತ್ ಸದಸ್ಯರಾದ ಜಯಪ್ರಕಾಶ್ ಬದಿನಾರು, ಪಂಚಾಯತ್ ಸದಸ್ಯೆ ಶ್ರೀಮತಿ ಪೂರ್ಣಿಮಾ ಯತೀಶ್ ಶೆಟ್ಟಿ ಬರೆಮೇಲು, ಕೋಡಿಂಬಾಡಿ-ಬೆಳ್ಳಿಪ್ಪಾಡಿ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಮೋನಪ್ಪ ಗೌಡ ಪಮ್ಮನಮಜಲು, ಪ್ರಧಾನ ಕಾರ್ಯದರ್ಶಿ ಯೋಗೀಶ್ ಯಸ್.
ಸಾಮಾನಿ ಸಂಪಿಗೆದಡಿ-ಮಠಂತಬೆಟ್ಟು ಉಪಾಧ್ಯಕ್ಷರಾದ ದಿನೇಶ್ ಶೆಟ್ಟಿ ಬರೆಮೇಲು, ಹುಸೈನ್ ಕೆ.ಬಿ.ಕೆ,ಕಾಂಗ್ರೆಸ್ ಮುಖಂಡರಾದ ವಿಕ್ರಮ್ ಶೆಟ್ಟಿ ಅಂತರ,ಬೂತ್ ಕಾಂಗ್ರೆಸ್ ಅಧ್ಯಕ್ಷರಾದ ಯತೀಶ್ ಶೆಟ್ಟಿ ಬರೆಮೇಲು, ಪ್ರಧಾನ ಕಾರ್ಯದರ್ಶಿ ಕೇಶವ ಗೌಡ ಬರೆಮೇಲು, ಉಪಾಧ್ಯಕ್ಷರಾದ ಇಬ್ರಾಹಿಂ ಸೇಡಿಯಾಪು, ಮನೆಯವರಾದ ಲೀಲಾವತಿ ಲಕ್ಷ್ಮಣ್ ಗೌಡ ಮೇಲಿನಹಿತ್ಲು ಬಾರಿಕೆ, ಮೋಹನ್ ಗೌಡ ಮೇಲಿನಹಿತ್ಲು, ದಿಕ್ಷೀತ್ ಗೌಡ ಎಂ.ಎಲ್, ಎಲ್ಯಣ್ಣ ಗೌಡ ಮೇಲಿನಹಿತ್ಲು ಬಾರಿಕೆ ಉಪಸ್ಥಿತರಿದ್ದರು.