ಪುತ್ತೂರು: ನಗರ ಸಭಾ ವತಿಯಿಂದ ಸಾಮೆತ್ತಡ್ಕ ಜಂಕ್ಷನ್ ನ ಬಳಿ ನಿರ್ಮಿಸಲಾಗಿದ್ದ ಪಾರ್ಕ್ ಜನರಿಗೆ ಬಹಳ ಉಪಯೋಗಿಯಾಗಿದ್ದು, ಅಲ್ಲಿನ ಪರಿಸರದ ನಿವಾಸಿಗಳಾದ ನೂರಾರು ಜನರು ಈ ಪಾರ್ಕಿನ ವಾಕಿಂಗ್ ಪಾತ್ ನಲ್ಲಿ ವಾಕ್ ಮಾಡುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಜನರಿಗೆ ಉಪಯೋಗ ಮಾಡದ ರೀತಿಯಲ್ಲಿ ಈ ಪಾರ್ಕ್ ನಲ್ಲಿ ತುಂಬಾ ಗಿಡಗಂಟಿಗಳು ಬೆಳೆದಿದ್ದು, ಈ ಸಮಸ್ಯೆಯನ್ನು ಮನಗಂಡ ‘ಸಾಮೆತ್ತಡ್ಕ ಯುವಕ ಮಂಡಲ’ದ ಯುವಕರು ಪಾರ್ಕ್ ಶ್ರಮದಾನದ ಮೂಲಕ ಸ್ವಚ್ಛ ಗೊಳಿಸಿದರು.
ಈ ಸಂದರ್ಭದಲ್ಲಿ ಪಾರ್ಕ್ ಗೆ ಭೇಟಿ ನೀಡಿದ ಮಾಜಿ ಶಾಸಕಿ ಶಕುಂತಲಾ ಟಿ ಶೆಟ್ಟಿ, ಎಂ ಬಿ ವಿಶ್ವನಾಥ ರೈ,ನಗರ ಸಭಾ ಮಾಜಿ ವಿಪಕ್ಷ ನಾಯಕ ಎಚ್ ಮಹಮ್ಮದ್ ಆಲಿ, ಎ ಪಿ ಎಂ ಸಿ ನಿರ್ದೇಶಕರಾದ ವಿ ಎಚ್ ಎ ಶಕೂರ್ ಹಾಜಿ, ಪುತ್ತೂರು ಸರಕಾರಿ ನೌಕರ ಸಂಘದ ಮಾಜಿ ಅಧ್ಯಕ್ಷ ಮೌರಿಸ್ ಮಸ್ಕೇರೇನಸ್, ಸಾಮಾಜಿಕ ಕಾರ್ಯಕರ್ತರುಗಳಾದ, ಶರೊನ್ ಸಿಕ್ವೆರಾ,ಪೂರ್ಣೇಶ್ ಭಂಡಾರಿ, ಸನಮ್ ನಝೀರ್, ದಿನೇಶ್ ಕಾಮತ್, ಭೇಟಿ ನೀಡಿ ಸಾಮೆತ್ತಡ್ಕ ಯುವಕ ಮಂಡಲದವರ ಸಮಾಜಮುಖಿ ಕಾರ್ಯಕ್ರಮವನ್ನು ಶ್ಲಾಘಿಸಿದರು.
ಪ್ರಸನ್ನ ಕುಮಾರ್ ಶೆಟ್ಟಿ ಸಿಜ್ಲರ್ ರವರ ನೇತೃತ್ವದಲ್ಲಿ ನಡೆದ ಈ ಶ್ರಮದಾನದಲ್ಲಿ ಸೂರಜ್ ಶೆಟ್ಟಿ, ಶ್ರೀನಾಥ್ ಆಚಾರ್ಯ, ಶಿರಾಜ್, ಇಂದೀವರ್, ರಾಕೇಶ್ ಮದಕ, ಸಂದೀಪ್, ಜೇಮ್ಸ್, ಪ್ರಸಾದ್ ಪಚ್ಚು, ಲೋಕೇಶ್, ಶಾಕೀರ್, ರೋಕಿ, ದಿನೇಶ್, ಪ್ರಭ, ಲೋಹಿತ್, ಅಕಿಲ್, ಅಂಕೇತ್, ಸಿಹಾನ್, ಶಿಯಾ, ಶೌರ್ಯ, ಸುದೇಶ್, ವಿಶ್ವನಾಥ್, ರೋಷನ್ ರೆಬೆಲ್ಲೋ, ಆಶಿಕ್, ಪ್ರೀತಂ ಮಸ್ಕೇರೇನಸ್, ರಫೀಕ್, ಹರ್ಷದ್, ಹಾಫಿಲ್ ದೀಪಕ್ ಮಲ್ಯ ಮೊದಲಾದವರು ಭಾಗವಹಿಸಿದ್ದರು.