ಪುತ್ತೂರು: ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷರಾಗಿ ಯಂಗ್ ಬ್ರಿಗೇಡ್ ವಿಟ್ಲ- ಉಪ್ಪಿನಂಗಡಿ ಅಧ್ಯಕ್ಷ, ದಲಿತ ಮುಖಂಡ ಅಭಿಷೇಕ್ ಬೆಳ್ಳಿಪ್ಪಾಡಿ ಆಯ್ಕೆಯಾಗಿದ್ದಾರೆ.
ಅಭಿಷೇಕ್ ರವರು ಹಿರಿಯ ಕಾಂಗ್ರೆಸ್ಸಿಗ ಕೆಪಿಸಿಸಿ ಸದಸ್ಯ ಡಾ. ರಘು ಬೆಳ್ಳಿಪ್ಪಾಡಿ ಅವರ ಪುತ್ರರಾಗಿದ್ದಾರೆ. ಹಾಗೆಯೇ ಪುತ್ತೂರಿನ ಯುವ ನಾಯಕ, ಸಂಘಟನಾ ಚತುರಾಗಿದ್ದಾರೆ.