ಪುತ್ತೂರು : ಸಲ್ ಸಬೀಲ್ ಯಂಗ್ ಮೆನ್ಸ್ ಕೂರ್ನಡ್ಕ ಇದರ ವಾರ್ಷಿಕ ಮಹಾಸಭೆ ಪಿರ್ ಮೊಹಲ್ಲಾ ಜುಮಾ ಮಸ್ಜಿದ್ ಅಧ್ಯಕ್ಷ ಕೆ.ಎಚ್. ಕಾಸಿಂ ಹಾಜಿ ರವರ ಅಧ್ಯಕ್ಷತೆಯಲ್ಲಿ ಕೂರ್ನಡ್ಕ ಮದ್ರಸ ಹಾಲ್ನಲ್ಲಿ ನಡೆಯಿತು.
ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಜ್, ಸದಸ್ಯರಾದ ಸಿದ್ದಿಕ್ ಕೆ.ಎ, ಉಮರ್ ಕೆ.ಎಸ್, ಸಮೀರ್ ನಾಜೂಕ್ ರವರ ಉಪಸ್ಥಿತಿಯಲ್ಲಿ ನೂತನ ಕಾರ್ಯಕಾರಿ ಸಮಿತಿ ರಚನೆ ಮಾಡಲಾಯಿತು. ಕೂರ್ನಡ್ಕ ಖತೀಬ ಉನೈಸ್ ಫೈಝಿ ದುವಾ ನೆರವೇರಿಸಿದರು.
ಸಮಿತಿ ನೂತನ ಅಧ್ಯಕ್ಷರಾಗಿ ಸಿರಾಜ್ ಎ.ಕೆ ಸತತ ಎರಡನೇ ಬಾರಿ ಅವಿರೋಧ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಹೈದರ್ ಚಾಯ್ಸ್, ಪ್ರಧಾನ ಕಾರ್ಯದರ್ಶಿಯಾಗಿ ಆಸೀಫ್ (ಅಚ್ಚು), ಕೋಶಾಧಿಕಾರಿಯಾಗಿ ಕೆ.ಎಸ್. ಸಿದ್ದಿಕ್ ಎರಡನೇ ಬಾರಿ ಅವಿರೋಧ ಆಯ್ಕೆಯಾದರು. ಇಪ್ಪತ್ತೊಂದು ಜನರ ಸಮಿತಿ ರಚಿಸಲಾಯಿತು.