ವಿಟ್ಲ: ಕನ್ಯಾನ ರಸ್ತೆಯ ದೇಲಂತಬೆಟ್ಟು ಸಮೀಪ ಬೈಕಿನಲ್ಲಿ ಬಂದ ನಟೋರಿಯಾಸ್ ಕಳ್ಳನೊಬ್ಬ ಮಹಿಳೆಯ ಚೈನ್ ಎಗರಿಸಿ ಪರಾರಿಯಾಗಿರುವ ಘಟನೆ ಅ.27 ರಂದು ಸಂಜೆ ನಡೆದಿದೆ.
ನಟೋರಿಯಾಸ್ ಕಳ್ಳನನ್ನು ಪೊಲೀಸರು ಹಿಂಬಾಲಿಸಿಕೊಂಡು ಬಂದಿದ್ದು, ಕನ್ಯಾನ ಕಡೆಗೆ ಪಲಾಯನ ಮಾಡುತ್ತಿದ್ದ ಕಳ್ಳನನ್ನು ಚೆಕ್ ಪೋಸ್ಟ್ ಬಳಿ ಪೊಲೀಸರು ಬೈಕ್ ನಿಲ್ಲಿಸಲು ಸೂಚನೆ ನೀಡಿದಾಗ ಆದರೇ ಆತ ನಿಲ್ಲಿಸದೇ ಪರಾರಿಯಾಗಿದ್ದಾನೆ.
ಪೊಲೀಸರು ಕಳ್ಳನನ್ನು ಬೆನ್ನಟ್ಟಿ ಬಂದಾಗ ಕಣಿಯೂರು ಎಂಬಲ್ಲಿ ಬೈಕಿನಿಂದ ಬಿದ್ದು ಚೆಂಬರ್ಪು ಬೆಂಗದಪಡ್ಪು ಕಾಡಿಗೆ ಓಡಿ ಹೋಗಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಆ ಪ್ರದೇಶದಲ್ಲಿ ವಿಟ್ಲ ಪೊಲೀಸರು ಕಳ್ಳನಿಗಾಗಿ ಹುಡುಕಾಟ ನಡೆಸುತ್ತಿದ್ದು, ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ. ಯಾರಾದರೂ ಅಪರಿಚಿತ ವ್ಯಕ್ತಿ ಇರುವುದನ್ನು ಕಂಡರೆ ವಿಟ್ಲ ಠಾಣೆಗೆ ತಿಳಿಸುವಂತೆ ಪೋಲಿಸ್ ಪ್ರಕಟಣೆ ತಿಳಿಸಿದೆ.