ಪುತ್ತೂರು: ವ್ಯಕ್ತಿಯೋರ್ವರು ಚಿನ್ನದ ಒಡವೆಗಳಿರುವ ಪ್ಲಾಸ್ಟಿಕ್ ಕವರ್ ಅನ್ನು ಕಳೆದುಕೊಂಡ ಘಟನೆ ಅ.28 ರಂದು ಮುಂಡೂರು, ಮೊಟ್ಟೆತ್ತಡ್ಕದಿಂದ ಪುತ್ತೂರಿಗೆ ಬರುವ ದಾರಿ ಮಧ್ಯೆ ನಡೆದಿದೆ.
ಚಿನ್ನ ಕಳೆದುಕೊಂಡವರನ್ನು ಪುತ್ತಿಲ ಮುಂಡೂರು ನಿವಾಸಿ ವಾದಿರಾಜ್ ಎನ್ನಲಾಗಿದೆ.
ವಾದಿರಾಜ್ ರವರು ಅ.28 ರಂದು ಮನೆಯಿಂದ ಮನೆಯಿಂದ ಮೊಟ್ಟೆತ್ತಡ್ಕ ಆಗಿ ಪುತ್ತೂರಿಗೆ ಬರುವಾಗ ಅವರ ಪ್ಯಾಂಟ್ ಜೇಬಿನಲ್ಲಿದ್ದ ಚಿನ್ನದ ಒಡವೆಗಳನ್ನೊಳಗೊಂಡ ಪ್ಲಾಸ್ಟಿಕ್ ಕವರ್ ದಾರಿ ಮಧ್ಯೆ ಕಳೆದುಹೋಗಿದೆ.
ಸುಮಾರು 5,00,000 ರೂ. ಮೌಲ್ಯ ಚಿನ್ನಾಭರಣಗಳು ಕಳೆದು ಹೋಗಿದ್ದು, ಈ ಬಗ್ಗೆ ಠಾಣೆಗೆ ದೂರು ನೀಡಿದ್ದಾರೆ. ಸಿಕ್ಕಿದವರು ಕೂಡಲೇ ಪುತ್ತೂರು ಪೋಲಿಸ್ ಠಾಣೆಯನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.