ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಗುರುಪುರದ ಗಂಜಿಮಠ ಬಳಿಯ ಮಳಲಿ ಎಂಬಲ್ಲಿ ಮುಸ್ಲಿಂ ದರ್ಗಾ ಕೆಡವಿದಾಗ ಹಿಂದೂ ದೇವಸ್ಥಾನ ಶೈಲಿಯ ಕಟ್ಟಡ ಪತ್ತೆಯಾಗಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಇದೀಗ ದರ್ಗಾ ನವೀಕರಣ ಕಾಮಗಾರಿಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಹಿಂದೂ ದೇವಸ್ಥಾನ ಶೈಲಿಯ ಕಟ್ಟಡ ಪತ್ತೆಯಾದ ಬೆನ್ನಲ್ಲೇ ದರ್ಗಾ ನವೀಕರಣಕ್ಕೆ ತಡೆ ಕೋರಿ ವಿಶ್ವ ಹಿಂದೂ ಪರಿಷದ್ ಮಂಗಳೂರಿನ ಮೂರನೇ ಜಿಲ್ಲಾ ನ್ಯಾಯಾಲಯ ಮೊರೆ ಹೋಗಿತ್ತು.
ವಿಚಾರಣೆ ನಡೆಸಿದ ಕೋರ್ಟ್, ಅಲ್ಲಿರುವ ಯಾವುದೇ ಮಾದರಿಯನ್ನು ಕಿತ್ತು ಹಾಕುವುದು ಅಥವಾ ಹಾನಿ ಮಾಡಬಾರದು. ಸದ್ಯ ಏನಿದೆಯೋ ಅಂದರೆ ಯಥಾಸ್ಥಿತಿ ಕಾಪಾಡುವಂತೆ ಕೋರ್ಟ್ ಸೂಚನೆ ನೀಡಿದೆ.