ಪುತ್ತೂರು : ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೋತ್ಸವಕ್ಕೆ ಏ.01ರ ಬೆಳಿಗ್ಗೆ ಪ್ರಾರ್ಥನೆ ಸಲ್ಲಿಸಿ ನಂತರ ವೃಷಭ ಲಗ್ನದಲ್ಲಿ ಗೊನೆ ಮುಹೂರ್ತ ನಡೆಯಲಿದೆ. ಮಧ್ಯಾಹ್ನ ಕೊಟ್ಟಿಬೆಟ್ಟು ಏಳ್ನಾಡುಗುತ್ತಿನವರಿಂದ ಅನ್ನಸಂತರ್ಪಣೆ ನೆರವೇರಲಿದೆ.
ಏ.10ರ ಶನಿವಾರ ಬೆಳಿಗ್ಗೆ ವೃಷಭ ಲಗ್ನದಲ್ಲಿ ಜಾತ್ರಾ ಮಹೋತ್ಸವಕ್ಕೆ ಧ್ವಜಾರೋಹಣ ನಡೆಯಲಿದೆ. ಮಧ್ಯಾಹ್ನ ಕುರಿಯ ಏಳ್ನಾಡುಗುತ್ತಿನವರಿಂದ ಅನ್ನಸಂತರ್ಪಣೆ ನೆರವೇರಲಿದೆ. ಸಂಜೆ ಅಂಕುರಾರ್ಪಣ, ಬಲಿ ಹೊರಟು ಉತ್ಸವ, ಬೊಳುವಾರು , ಶ್ರೀ ರಾಮ ಪೇಟೆ ಕಾರ್ಜಾಲು, ರಕ್ತೇಶ್ವರಿ ದೇವಸ್ಥಾನ , ಕಲ್ಲೆಗ , ಕರ್ಮಲ ಕಡೆ ಶ್ರೀ ದೇವರ ಪೇಟೆ ಸವಾರಿ ನಡೆಯಲಿದೆ.
ಏ.11ರ ಆದಿತ್ಯವಾರ ಸಂಜೆ ಉತ್ಸವ, ನೆಲ್ಲಿಕಟ್ಟೆ, ಸಾಲ್ಮರ ಸೂತ್ರಬೆಟ್ಟು ಕಡೆ ಶ್ರೀ ದೇವರ ಪೇಟೆ ಸವಾರಿ.
ಏ.12 ಸೋಮವಾರ ಸಂಜೆ ಉತ್ಸವ, ಶಿವಪೇಟೆ, ತೆಂಕಿಲ, ಕೊಟ್ಟಿಬೆಟ್ಟು, ಏಳ್ನಾಡುಗುತ್ತು, ಬೈಪಾಸ್ ಹೆದ್ದಾರಿ ರಾಧಾಕೃಷ್ಣ ಮಂದಿರದ ಕಡೆ ಶ್ರೀ ದೇವರ ಪೇಟೆ ಸವಾರಿ.
ಏ.13ರ ಮಂಗಳವಾರ ಸಂಜೆ ಉತ್ಸವ, ಕೋರ್ಟು ರಸ್ತೆ, ಸೈನಿಕ ಭವನ ರಸ್ತೆ, ಬಪ್ಪಳಿಗೆ, ಉರ್ಲಾಂಡಿ, ಬೋಳುವಾರು ಬೈಲ್ ಕಡೆ ದೇವರ ಪೇಟೆ ಸವಾರಿ.
ಏ.14ರ ಬುಧವಾರ ಸೌರಮಾನ ಯುಗಾದಿ (ವಿಷು) ಪ್ರಯುಕ್ತ ಬೆಳಗ್ಗೆ ಉತ್ಸವ ಶ್ರೀ ದೇವರ ಬಲಿ ವಸಂತಕಟ್ಟೆ ಪೂಜೆ ಸಂಜೆ ಉತ್ಸವ,ಬಂಡಿ ಉತ್ಸವ ಕೊಂಬೆಟ್ಟು, ಬೋಳುವಾರು,ಹಾರಾಡಿ ತಾಳೆಪ್ಪಾಡಿ, ದ್ರಾವಿಡ ಬ್ರಾಹ್ಮಣ ಹಾಸ್ಟೆಲ್, ಸಕ್ಕರೆ ಕಟ್ಟೆ ಕಡೆಗೆ ಶ್ರೀ ದೇವರ ಪೇಟೆ ಸವಾರಿ.
ಏ.15ರ ಗುರುವಾರ ಸಂಜೆ ಬನ್ನೂರು, ಅಶೋಕನಗರ, ರೈಲ್ವೆ ಮಾರ್ಗದ ಕಡೆ ದೇವರ ಪೇಟೆ ಸವಾರಿ.
ಏ.16ರ ಶುಕ್ರವಾರ ಸಂಜೆ ಉತ್ಸವ, “ಶ್ರೀ ಮಹಾಲಿಂಗೇಶ್ವರ ಹಾಗೂ ಶ್ರಿ ದಂಡನಾಯಕ ಉಳ್ಳಾಲ್ತಿ ಭೇಟಿ” ಪಲ್ಲಕ್ಕಿ ಉತ್ಸವ “ಸಣ್ಣ ರಥೋತ್ಸವ ಕೆರೆ ಅಯನ ತೆಪ್ಪೋತ್ಸವ” ನಡೆಯಲಿದೆ.
ಏ.17ರ ಶನಿವಾರ ಬೆಳಗ್ಗೆ ವಸಂತಕಟ್ಟೆ ಪೂಜೆ ದರ್ಶನ ಬಲಿ ರಾತ್ರಿ ವೈಭವದ “ಬ್ರಹ್ಮರಥೋತ್ಸವ ” “ಪುತ್ತೂರು ಬೆಡಿ“
ಬಂಗಾರ್ ಕಾಯರ್ ಕಟ್ಟೆ ಸವಾರಿ, ಶ್ರೀ ದಂಡನಾಯಕ- ಉಳ್ಳಾಲ್ತಿ ದೈವಗಳ ಬೀಳ್ಕೊಡುಗೆ ಶ್ರೀ ಭೂತಬಲಿ, ಶಯನ ನಡೆಯಲಿದೆ.
ಏ.18ರ ಆದಿತ್ಯವಾರ ಬೆಳಿಗ್ಗೆ ಬಾಗಿಲು ತೆಗೆಯುವ ಮುಹೂರ್ತ 8.30 ತುಲಾಭಾರ ಸೇವೆ ನಡೆಯಲಿದೆ. ಸಂಜೆ ವೀರಮಂಗಿಲ ಅವಭೃತ ಸ್ನಾನಕ್ಕೆ ಸವಾರಿ
ಏ.19ರ ಸೋಮವಾರ ಧ್ವಜಾವರೋಹಣ ನಡೆಯಲಿರುವುದು. ರಾತ್ರಿ ಚೂರ್ಣೋತ್ಸವ, ವಸಂತ ಪೂಜೆ ಪ್ರಾರಂಭ, ಪಿಲಿಭೂತ , ರಕ್ತೇಶ್ವರಿ ದೈವಗಳ ನೇಮೋತ್ಸವ ನೆರವೇರಲಿರುವುದು.
ಏ. 20ರ ಮಂಗಳವಾರ ಸಂಪ್ರೋಕ್ಷಣೆ ರಾತ್ರಿ ಮಂತ್ರಾಕ್ಷತೆಯ ನಂತರ ಅಂಙಣತ್ತಾಯ, ಪಂಜುರ್ಲಿ ವಗೈರೆ ದೈವಗಳ ನೇಮೋತ್ಸವವು ನಡೆಯಲಿರುವುದು.