ಪುತ್ತೂರು : ವಿವೇಕಾನಂದ ಕಾಲೇಜಿನ ಇತಿಹಾಸ ವಿಭಾಗದ ಉಪನ್ಯಾಸಕಿ ಶ್ರೀಮತಿ ವಿಜಯಲಕ್ಷ್ಮಿಯವರಿಗೆ ಹಂಪಿ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಪುತ್ತೂರಿನ ಸುದಾನ-ಕಿಟ್ಟೆಲ್ ಅಭಿವೃದ್ಧಿ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ರವರ ಮಾರ್ಗದರ್ಶನದಲ್ಲಿ ಶ್ರೀಮತಿ ವಿಜಯಲಕ್ಷ್ಮಿಯವರು ‘ಕರಾವಳಿ ಕರ್ನಾಟಕ ಆರ್ಥಿಕತೆಯಲ್ಲಿ ಬಂದರು ಹಾಗೂ ಕೋಟೆಗಳ ಪಾತ್ರ(ಕ್ರಿ.ಶ.1500-ಕ್ರಿ.ಶ1800)’ ಎಂಬ ವಿಷಯದ ಮೇಲೆ ಬರೆದು, ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಮಹಾಪ್ರಬಂಧವನ್ನು ಅಂಗೀಕರಿಸಿರುವ ಹಂಪಿ ವಿಶ್ವವಿದ್ಯಾಲಯವು ಶ್ರೀಮತಿ ವಿಜಯಲಕ್ಷ್ಮಿಯವರಿಗೆ ಡಾಕ್ಟರೇಟ್ ಪದವಿಯನ್ನು ನೀಡಿ ಪುರಸ್ಕರಿಸಿದೆ.
ವಾಸುದೇವ ನಾಯಕ್ ಮತ್ತು ಶ್ರೀಮತಿ ಮಾಲಿನಿಯವರ ಪುತ್ರಿಯಾಗಿರುವ ಡಾ. ವಿಜಯಲಕ್ಷ್ಮಿಯವರು ಪ್ರಸ್ತುತ ಪತಿ ದಿನೇಶ್ ನಾಯಕ್ ಮತ್ತು ಕುಟುಂಬದವರೊಂದಿಗೆ ಬಂಟ್ವಾಳದ ಕಲ್ಲಡ್ಕದಲ್ಲಿ ವಾಸವಾಗಿದ್ದಾರೆ.