ಬೆಳ್ತಂಗಡಿ: ತಾಲೂಕಿನ ಮರೋಡಿ ಗ್ರಾಮದಲ್ಲಿ ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟದ ಬ್ಯಾನರ್ ಹರಿದ ಪ್ರಕರಣಕ್ಕೆ ಮಹತ್ತರ ತಿರುವು ದೊರೆತಿದೆ.
ಸ್ಥಳೀಯ ನಿವಾಸಿಗಳೆಯಾದ ಮೂವರು ಅಪ್ರಾಪ್ತ ಮಕ್ಕಳಿಂದ ಈ ಕೃತ್ಯ ನಡೆದಿದ್ದು. ಪೋಷಕರ ಸಹಿತ ಮೂವರು ಅಪ್ರಾಪ್ತರು ಮರೋಡಿಯ ಪೊಸರಡ್ಕ ಕ್ಷೇತ್ರಕ್ಕೆ ಬಂದು ತಪ್ಪು ಕಾಣಿಕೆಯನ್ನು ಸಲ್ಲಿಸಿ ತಪ್ಪೋಪ್ಪಿಕೊಂಡಿದ್ದಾರೆ.
ಯಾರೇ ಕೃತ್ಯವನ್ನು ಎಸೆಗಿದ್ದರು 24 ಗಂಟೆಯೊಳಗಾಗಿ ಕ್ಷೇತ್ರಕ್ಕೆ ಬಂದು ತಪ್ಪೋಪ್ಪಿ ಕೊಳ್ಳಬೇಕೆಂದು ಸೂಚಿಸಲಾಗಿತ್ತು. ಕೃತ್ಯವೇಸೆಗಿದ ಅಪ್ರಾಪ್ತರು ತಿಳಿಯದೆ ಈ ಕೃತ್ಯವನ್ನು ಎಸೆಗಿದ್ದಾರೆ. ಅವರ ತಪ್ಪನ್ನು ಮನ್ನಿಸಬೇಕೆಂದು ವಿನಂತಿಸಿ ಪೊಸರಡ್ಕ ಶ್ರೀ ದೈವ ಕೊಡಮಣಿತ್ತಾಯ ಹಾಗೂ ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಯಕ್ಷಗಾನ ಆಯೋಜಕರ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಪ್ರಾರ್ಥಿಸಲಾಯಿತು ಎಂದು ತಿಳಿದು ಬಂದಿದೆ..