ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮೊಬೈಲ್ ರಿಟೇಲರ್ ಅಸೋಸಿಯೇಷನ್ ಆಯೋಜಿಸಿದ ವಾರ್ಷಿಕ ಕ್ರೀಡಾಕೂಟ ಜ.29 ರಂದು ಮಂಗಳೂರಿನ ಕದ್ರಿಯ ಕೆಪಿಟಿ ಮೈದಾನದಲ್ಲಿ ನಡೆಯಿತು.
ಉಡುಪಿ, ಮಂಗಳೂರು, ಕುಂದಾಪುರ, ಮೂಡಬಿದ್ರೆ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ಸುಳ್ಯ ಹೀಗೆ 8 ತಾಲೂಕಿನ ಮೊಬೈಲ್ ಅಂಗಡಿ ಮಾಲಕರ ತಂಡಗಳು ಭಾಗವಹಿಸಿದ್ದವು.
ಕ್ರಿಕೆಟ್, ವಾಲಿಬಾಲ್, ಗುಂಡೆಸೆತ, ಅಥ್ಲೆಟಿಕ್ಸ್, ಹಗ್ಗ ಜಗ್ಗಾಟ ಹೀಗೆ ಹಲವು ಪಂದ್ಯಾಟಗಳು ನಡೆಯಿತು. ಹಗ್ಗ ಜಗ್ಗಾಟದಲ್ಲಿ ಪುತ್ತೂರಿನ ಮೊಬೈಲ್ ಅಂಗಡಿ ಮಾಲಕರ ‘ಪುತ್ತೂರಿನ ಮುತ್ತು ತಂಡ’ ದ್ವಿತೀಯ ಸ್ಥಾನ ಗಳಿಸಿತು. ಸೆಮಿ ಫೈನಲ್ ನಲ್ಲಿ ಉಡುಪಿ ತಂಡವನ್ನು ಸೆಣೆಸಾಡಿ ಫೈನಲ್ ಪ್ರವೇಶಿಸಿ ಕುಂದಾಪುರ ತಂಡದೊಂದಿಗೆ ಫೈನಲ್ ನಡೆಯಿತು. ಇದರಲ್ಲಿ ದ್ವಿತೀಯ ಸ್ಥಾನ ಪುತ್ತೂರು ತಂಡ ಪಡೆಯಿತು.
‘ಪುತ್ತೂರಿನ ಮುತ್ತು ತಂಡ’ ಗುಂಡೆಸೆತದಲ್ಲಿ ಈಫಾ ಮೊಬೈಲ್ ನ ಪ್ರಕಾಶ್ ಅವರು ದ್ವಿತೀಯ ಸ್ಥಾನ ಪಡೆದರು. ಪುತ್ತೂರಿನ ಅಂಗಡಿಯ ಮಾಲಕರ ಸಂಘದ ಗೌರವಾಧ್ಯಕ್ಷರಾದ ಸಿರಾಜುದ್ದೀನ್ ಮತ್ತು ಅಧ್ಯಕ್ಷರಾದ ಪ್ರವೀಣ್, ಪ್ರಧಾನ ಕಾರ್ಯದರ್ಶಿ ಪ್ರಕಾಶ್, ಕೋಶಾಧಿಕಾರಿ ರಿಯಾಜ್ ಹಾಗೂ ಪುತ್ತೂರಿನ 25 ಅಂಗಡಿಯ ಮಾಲಕರು ಭಾಗವಹಿಸಿದ್ದರು.
‘ಪುತ್ತೂರಿನ ಮುತ್ತು ತಂಡ’ದ ಪ್ರಾಯೋಜಕತ್ವವನ್ನು ಪ್ರವೀಣ್ ಸೆಲ್ ಝೋನ್ ನೆರವೇರಿಸಿದರು. ಪುತ್ತೂರು ಮುತ್ತುತಂಡದ ತರಬೇತುದಾರರಾಗಿ ಉಪ್ಪಿನಂಗಡಿಯ ಝೆನ್ ಮೊಬೈಲ್ ಮಾಲೀಕರಾದ ರಫೀಕ್ ಅವರು ನಿರ್ವಹಿಸಿದರು..