ಕೊಕ್ಕಡ : ವ್ಯಾಪ್ತಿಯಲ್ಲಿನ ಹಾಗೂ ತಾಲೂಕಿನ ಇತರ ಭಾಗಗಳ ಎಂಡೋಸಲ್ಫಾನ್ ಸಂತ್ರಸ್ತ ವಿಕಲಚೇತನರಿಗೆ ಸರ್ಕಾರದಿಂದ ನೀಡುವ ಉಚಿತ ಬಸ್ ಪಾಸನ್ನು ವಿತರಿಸುವ ಶಿಬಿರವನ್ನು ಕೊಕ್ಕಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಸಲಾಯಿತು.

ಈ ಶಿಬಿರದಲ್ಲಿ ತಾಲೂಕಿನ 170 ಜನ ಎಂಡೋ ಪೀಡಿತ ವಿಕಲಚೇತನರು ತಮ್ಮ ಉಚಿತ ಪಾಸನ್ನು ನವೀಕರಣ ಮಾಡಿಸಿ ಪ್ರಯೋಜನ ಪಡೆದುಕೊಂಡರು. ಈ ಶಿಬಿರವನ್ನು ಯಶಸ್ವಿಯಾಗಿ ನಡೆಸಲು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಹತ್ತು ಜನ ಕಾರ್ಯಕರ್ತ ಸಿಬ್ಬಂದಿಯವರು ಸಹಕಾರ ನೀಡಿ ನಡೆಸುವುದರೊಂದಿಗೆ ಪುತ್ತೂರು ಕೆ.ಎಸ್.ಆರ್.ಟಿ.ಸಿ ಯ 3 ಜನ ಸಿಬ್ಬಂದಿಯವರು ಇದ್ಧು ಉಚಿತ ಬಸ್ ಪಾಸ್ ವಿತರಿಸಿದರು.


ಈ ಸಂದರ್ಭದಲ್ಲಿ ಜಿಲ್ಲೆಯ ಜಿಲ್ಲಾ ವೈಧ್ಯಾಧಿಕಾರಿ ಕಛೇರಿಯ ಡಾ. ನವೀನ್ ಕುಲಾಲ್ ಹಾಗೂ ಜಿಲ್ಲಾ ಎಂಡೋ ಸೆಲ್ ನ ನೋಡಲ್ ಅಧಿಕಾರಿಯಾದ ಸಾಜು, ತಾಲೂಕಿನ ವಿಕಲಚೇತನರ ಮೇಲ್ವಿಚಾರಕರಾದ ಜೋನ್ ಬ್ಯಾಪ್ಟಿಸ್ಟ್ ಹಾಗೂ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಅಧಿಕಾರಿಗಳಾದ ರಕ್ಷಿತ್ ಮತ್ತು ಸೋಮನಾಥ್ ಉಪಸ್ಥಿತರಿದ್ದರು.
ಕೊಕ್ಕಡ ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿಯವರ ಮತ್ತು ಸಿಬ್ಬಂದಿ ವರ್ಗದವರ ಸಂಪೂರ್ಣ ಸಹಕಾರದಿಂದ ಶಿಬಿರ ಯಶಸ್ವಿಯಾಯಿತು.