Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪುತ್ತೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಆಸ್ಪತ್ರೆಯ ಲೋಗೋ ಹಾಗೂ ಟ್ಯಾಗ್ ಲೈನ್ ( ಧ್ಯೇಯ ವಾಕ್ಯ) ವಿನ್ಯಾಸ ಸ್ಪರ್ಧೆ

    ಪುತ್ತೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಆಸ್ಪತ್ರೆಯ ಲೋಗೋ ಹಾಗೂ ಟ್ಯಾಗ್ ಲೈನ್ ( ಧ್ಯೇಯ ವಾಕ್ಯ) ವಿನ್ಯಾಸ ಸ್ಪರ್ಧೆ

    ಪುತ್ತೂರು: ಬನ್ನೂರು ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಸೂರಜ್ ನಿಧನ..!!

    ಪುತ್ತೂರು: ಬನ್ನೂರು ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಸೂರಜ್ ನಿಧನ..!!

    ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ತೃತೀಯ ವರ್ಷದ ಸಾರ್ವಜನಿಕ ವರಮಹಾಲಕ್ಷ್ಮಿ ಪೂಜೆ ; ಪದಾಧಿಕಾರಿಗಳ ಆಯ್ಕೆ.!!

    ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ತೃತೀಯ ವರ್ಷದ ಸಾರ್ವಜನಿಕ ವರಮಹಾಲಕ್ಷ್ಮಿ ಪೂಜೆ ; ಪದಾಧಿಕಾರಿಗಳ ಆಯ್ಕೆ.!!

    ಪುತ್ತೂರು : ರಸಿಕಾ ಕಂಬ್ಳೆ ನಿಧನ..!!

    ಪುತ್ತೂರು : ರಸಿಕಾ ಕಂಬ್ಳೆ ನಿಧನ..!!

    ಪುತ್ತೂರು ಇಂಟರ್‌ನೆಟ್ ಕೇಬಲ್ ಅಳವಡಿಸುವ ವೇಳೆ ವಿದ್ಯುತ್ ಸ್ಪರ್ಶಗೊಂಡು ಪದ್ಮನಾಭ ಮೃತ್ಯು

    ಉಪ್ಪಿನಂಗಡಿ: ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ..!!

    ಪುತ್ತೂರು: ವಿಚಾರಣೆಗೆ ಗೈರಾಗಿದ್ದ ಪೋಕ್ಸೋ ಪ್ರಕರಣದ ಆರೋಪಿ ಬಂಧನ..!!

    ಪುತ್ತೂರು: ವಿಚಾರಣೆಗೆ ಗೈರಾಗಿದ್ದ ಪೋಕ್ಸೋ ಪ್ರಕರಣದ ಆರೋಪಿ ಬಂಧನ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪುತ್ತೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಆಸ್ಪತ್ರೆಯ ಲೋಗೋ ಹಾಗೂ ಟ್ಯಾಗ್ ಲೈನ್ ( ಧ್ಯೇಯ ವಾಕ್ಯ) ವಿನ್ಯಾಸ ಸ್ಪರ್ಧೆ

    ಪುತ್ತೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಆಸ್ಪತ್ರೆಯ ಲೋಗೋ ಹಾಗೂ ಟ್ಯಾಗ್ ಲೈನ್ ( ಧ್ಯೇಯ ವಾಕ್ಯ) ವಿನ್ಯಾಸ ಸ್ಪರ್ಧೆ

    ಪುತ್ತೂರು: ಬನ್ನೂರು ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಸೂರಜ್ ನಿಧನ..!!

    ಪುತ್ತೂರು: ಬನ್ನೂರು ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಸೂರಜ್ ನಿಧನ..!!

    ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ತೃತೀಯ ವರ್ಷದ ಸಾರ್ವಜನಿಕ ವರಮಹಾಲಕ್ಷ್ಮಿ ಪೂಜೆ ; ಪದಾಧಿಕಾರಿಗಳ ಆಯ್ಕೆ.!!

    ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ತೃತೀಯ ವರ್ಷದ ಸಾರ್ವಜನಿಕ ವರಮಹಾಲಕ್ಷ್ಮಿ ಪೂಜೆ ; ಪದಾಧಿಕಾರಿಗಳ ಆಯ್ಕೆ.!!

    ಪುತ್ತೂರು : ರಸಿಕಾ ಕಂಬ್ಳೆ ನಿಧನ..!!

    ಪುತ್ತೂರು : ರಸಿಕಾ ಕಂಬ್ಳೆ ನಿಧನ..!!

    ಪುತ್ತೂರು ಇಂಟರ್‌ನೆಟ್ ಕೇಬಲ್ ಅಳವಡಿಸುವ ವೇಳೆ ವಿದ್ಯುತ್ ಸ್ಪರ್ಶಗೊಂಡು ಪದ್ಮನಾಭ ಮೃತ್ಯು

    ಉಪ್ಪಿನಂಗಡಿ: ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ..!!

    ಪುತ್ತೂರು: ವಿಚಾರಣೆಗೆ ಗೈರಾಗಿದ್ದ ಪೋಕ್ಸೋ ಪ್ರಕರಣದ ಆರೋಪಿ ಬಂಧನ..!!

    ಪುತ್ತೂರು: ವಿಚಾರಣೆಗೆ ಗೈರಾಗಿದ್ದ ಪೋಕ್ಸೋ ಪ್ರಕರಣದ ಆರೋಪಿ ಬಂಧನ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ನ್ಯೂಸ್ ಪುತ್ತೂರು

ಇತಿಹಾಸ ನಿರ್ಮಿಸಲಿದೆ ಬೆಂಗಳೂರು ಕಂಬಳ : ಬೆಂಗಳೂರು ಕಂಬಳ ಹೇಗಿರುತ್ತದೆ ಎಂದು ವಿವರವಾಗಿ ತಿಳಿಸಿದ ಶಾಸಕ ಅಶೋಕ್ ರೈ

November 16, 2023
in ಪುತ್ತೂರು, ಬೆಂಗಳೂರು, ರಾಜ್ಯ
0
ಇತಿಹಾಸ ನಿರ್ಮಿಸಲಿದೆ ಬೆಂಗಳೂರು ಕಂಬಳ : ಬೆಂಗಳೂರು ಕಂಬಳ ಹೇಗಿರುತ್ತದೆ ಎಂದು ವಿವರವಾಗಿ ತಿಳಿಸಿದ ಶಾಸಕ ಅಶೋಕ್ ರೈ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ಪುತ್ತೂರು : ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯದ ರಾಜಧಾನಿಯಲ್ಲಿ ಕಂಬಳ ನಡೆಯಲಿದೆ. ಕರಾವಳಿಯ ಜನಪದ ಕ್ರೀಡೆ ವಿಶ್ವಕ್ಕೆ ಪರಿಚಯವಾಗಲಿದೆ. ಕಂಬಳದ ಬಳಿಕ ತುಳುವರಿಗೊಂದು ಭವನ ಬೆಂಗಳೂರಿನಲ್ಲಿ ನಿರ್ಮಾಣವಾಗಬೇಕು ಇದಕ್ಕಾಗಿ ಎರಡು ಎಕ್ರೆ ಜಾಗವನ್ನೂ ಬೆಂಗಳೂರಿನಲ್ಲಿ ನೀಡಬೇಕು. ತುಳುನಾಡಿನ ಜನತೆಯ ಶಕ್ತಿಪ್ರದರ್ಶನದ ಜೊತೆ ನಮ್ಮ ಕಲೆ ಸಂಸ್ಕೃತಿ ವಿಶ್ವಕ್ಕೆ ಪರಿಚಯವಾಗಲಿದೆ ಇದುವೇ ಕಂಬಳದ ಮುಖ್ಯ ಉದ್ದೆಶವಾಗಿದೆ ಎಂದು ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷರೂ, ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಹೇಳಿದರು.

Advertisement
Advertisement
Advertisement

Advertisement

ಪುತ್ತೂರಿನಲ್ಲಿ ನಡೆದ ಬೆಂಗಳೂರು ಕಂಬಳ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಕಂಬಳದ ಬಗ್ಗೆ ಮಾಹಿತಿ ನೀಡಿದ್ದು ಹೀಗೆ

ಅಧಿವೇಶನದಲ್ಲಿ ತುಳುವಿನಲ್ಲಿ ಮಾತನಾಡಿದಾಗಲೇ ಹುಟ್ಟಿಕೊಂಡಿತ್ತು. ಅಧಿವೇಶನದಲ್ಲಿ ತುಳುವಿನಲ್ಲಿ ಮಾತನಾಡಿದಾಗಲೇ ಬೆಂಗಳೂರಿನಲ್ಲಿರುವ ತುಳು ಸಂಘಟನೆಗಳು ಸಂತೋಷಗೊಂಡಿದ್ದರು. ಆ ಬಳಿಕ ಸಂಘಟನೆಯ ಪ್ರಮುಖರು ಬಂದು ನನ್ನನ್ನು ಅಭಿನಂದಿಸಿ ತುಳುವಿನಲ್ಲಿ ಮಾತನಾಡಿದಕ್ಕೆ ಶಹಬ್ಬಾಸ್ ಎಂದು ಹೇಳಿ ಬೆಂಗಳೂರಿನಲ್ಲಿ ಕಂಬಳವನ್ನು ಆಯೋಜನೆ ಮಾಡಬೇಕು ಎಂಬ ಆಗ್ರಹವನ್ನು ನನ್ನ ಮುಂದಿಟ್ಟಿದ್ದರು. ಆ ಬಳಿಕ ನಾವು ಚರ್ಚೆ ಮಾಡುವಾಗಲೇ ಮಾಧ್ಯಮದಲ್ಲಿ ಬೆಂಗಳೂರು ಕಂಬಳದ ಬಗ್ಗೆ ವರದಿ ಪ್ರಕಟವಾಗಿತ್ತು.

ರಾಣಿ ಆರಂಭದಲ್ಲಿ ಒಪ್ಪಲಿಲ್ಲ

ಕಂಬಳ ನಡೆಸಬೇಕಾದರೆ ಅರಮನೆ ಮೈದಾನವೇ ಬೇಕಾಗಿತ್ತು. ಈ ಬಗ್ಗೆ ನಮ್ಮ ಒಂದು ತಂಡ ರಾಣಿಯ ಬಳಿ ಮಾತನಾಡಲು ತೆರಳಿದಾಗ ಅವರು ಒಪ್ಪಲಿಲ್ಲ. ನಮ್ಮ ರಾಜಮನೆತನದ ಪುರೋಹಿತರು ಇದ್ದಾರೆ ಅವರು ಹೇಳಿದರೆ ಮಾತ್ರ ಪರಿಶೀಲಿಸುವ ಎಂದು ಹೇಳಿದರು. ರಾಜಪುರೋಹಿತರು ಪ್ರಶ್ನೆ ಕೇಳಬೇಕು, ಮೈದಾನದಲ್ಲಿ ಯಾವುದೇ ಕಾರ್ಯಕ್ರಮ ಮಾಡುವುದದರೆ ಪ್ರಶ್ನೆ ಕೇಳಬೇಕಾಗುತ್ತದೆ. ಪುರೋಹಿತರ ಪ್ರಕಾರ ನಡೆಯಬೇಕಿದೆ ಎಂದು ರಾಣಿ ಹೇಳಿದ್ದರು. ಆ ಬಳಿಕ ನಮ್ಮನ್ನು ಪುರೋಹಿತರೇ ಕರೆದು ನೀವು ಮೈದಾನದಲ್ಲಿ ಕಂಬಳ ಮಾಡಬೇಕು, ಕಂಬಳ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ಪ್ರಶ್ನೆಯಲ್ಲಿ ಕಂಡು ಬಂದಿದೆ ಎಂದು ಹೇಳಿದರು. ಆಗ ನಮಗೆ ಇನ್ನಷ್ಟು ಧೈರ್ಯ ಬಂತು.

90 ಲಕ್ಷ ಬಾಡಿಗೆ ಹೇಳಿದವರು ಉಚಿತವಾಗಿ ಕೊಟ್ಟರು

ಅರಮನೆ ಮೈದಾನದ ಒಂದು ಭಾಗ ರಾಜಮನೆತನದ ಬೇರೊಬ್ಬರು ವ್ಯಕ್ತಿಗೆ ಸೇರಿದ್ದು. ನಾವು ಅಲ್ಲಿ ಶಾಮಿಯಾನ ಹಾಕಿದಾಗ ಜಾಗದ ಮಾಲಕರು ಬಂದು 90 ಲಕ್ಷ ಬಾಡಿಗೆ ಕೊಟ್ರೆ ಮಾತ್ರ ಅಲ್ಲಿ ಅವಕಾಶ ಕೊಡುವುದಾಗಿ ಹೇಳಿದರು. ಆ ಬಳಿಕ ಆ ವ್ಯಕ್ತಿಯಲ್ಲಿ ಕಂಬಳದ ಬಗ್ಗೆ ಮಾಹಿತಿ ನೀಡಲಾಯಿತು. ಅವರಿಗೆ ಮನವರಿಕೆ ಮಾಡಿದ ಬಳಿಕ ಅವರು ಬಾಡಿಗೆಯೇ ಬೇಡ ಉಚಿತವಾಗಿ ಮಾಡಿ ಎಂದು ಹೇಳಿದ್ದಾರೆ ಆದರೂ ನಾವು ಅವರಿಗೆ ಗೌರವಧನವನ್ನು ನೀಡುತ್ತೇವೆ ಎಂದು ಹೇಳಿದ್ದೇವೆ. ಹೀಗೆ ಮೈದಾನದಲ್ಲಿ ಇದ್ದ ಅಡೆತಡೆಗಳು ಎಲ್ಲವೂ ದೇವರ ದಯೆಯಿಂದ ನಿವಾರಣೆಯಾಯಿತು.

ಮಂಗಳೂರಿನಿಂದ ಬೆಂಗಳೂರು ತನಕ ಮೆರವಣಿಗೆ

ಕಂಬಳದ ಕೋಣಗಳನ್ನು ಲಾರಿಯಲ್ಲಿ ಹಾಗೇ ಕೊಂಡು ಹೋಗುವುದಿಲ್ಲ. ಬ್ಯಾಂಡ್ ವಾಧ್ಯಗಳ ಮೂಲಕ ತೆರಳುತ್ತೇವೆ. ಅಲ್ಲಲ್ಲಿ ಕಂಬಳದ ಕೋಣದ ಮಾಲಕರಿಗೆ ಸರ್ವ ವ್ಯವಸ್ಥೆಗಳನ್ನು ಮಾಡುತ್ತೇವೆ. ಕಂಬಳದ ಕೋಣದ ಮಾಲಕರಿಗೆ ಸಕಲ ಗೌರವಾಧರಗಳನ್ನು ಕೊಡಲಿದ್ದೇವೆ. ಅವರಿಗೆ ಎಲ್ಲೂ ಒಂದುಷ್ಟು ವ್ಯತ್ಯಾಸವಾಗದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಕೋಣಗಳಿಗೂ ತೊಂದರೆಯಾಗದಂತೆ ಸಿದ್ದತೆಗಳನ್ನು ಕೈಗೊಳ್ಳಲಾಗುತ್ತದೆ. ತಾಲೂಕು ಕೇಂದ್ರ ಬದಲಾದಂತೆ ನಾವು ಅಲ್ಲಲ್ಲಿ ಬ್ಯಾಂಡ್ , ವಾಧ್ಯಗಳ ಘೋಷಗಳೊಂದಿಗೆ ಸಣ್ಣದೊಂದು ಕಾರ್ಯಕ್ರಮವನ್ನು ಮಾಡಲಿದ್ದೇವೆ. ಮೈಕ್ ಕಟ್ಟಿದ ವಾಹನವೊಂದು ಜೊತೆಗೆ ಇದ್ದು ಪ್ರಚಾರ ಕಾರ್ಯವನ್ನು ಮಾಡಲಿದೆ. ಲಾರಿಯ ಹಿಂದೆ, ಮುಂದೆ ಬೆಂಗಾವಲು ವಾಹನಗಳು ಇರುತ್ತದೆ.

ಹಾಸನದಿಂದ ನೆಲಮಂಗಲಕ್ಕೆ ಭವ್ಯ ಮೆರವಣಿಗೆ

ಹಾಸನದಿಂದ ನೆಲಮಂಗಲದ ತನಕ ಭವ್ಯ ಮೆರವಣಿಗೆಯಲ್ಲಿ ಕೋಣಗಳನ್ನು ಕರೆದೊಯ್ಯಲಾಗುತ್ತದೆ. ಬೆಂಗಳೂರಿನಿಂದ 75 ರಿಂದ 100 ವಾಹನಗಳು ಹಾಸನಕ್ಕೆ ಬರಲಿದೆ. ಹಾಸನದಿಂದ ನೆಲಮಂಗಲ ತನಕ ಮೆರವಣಿಗೆಯಲ್ಲಿ ಸಾಗುವುದು. ನ.24 ರಂದು ಅರಮನೆ ಮೈದಾನಕ್ಕೆ ಪ್ರವೇಶ ಅಲ್ಲಿ ಭವ್ಯ ಸ್ವಾಗತ ನೀಡಲಾಗುತ್ತದೆ. ಆ ದಿನ ವಿರಾಮದ ದಿನವಾಗಿದ್ದು, ಅದೇ ದಿನ ಅರಮನೆ ಮೈದಾನದಲ್ಲಿ ತುಳು ಕಾರ್ಯಕ್ರಮಗಳು ನಡೆಯಲಿದೆ. ನ. 25 ರಂದು ಬೆಳಿಗ್ಗೆ ಕಂಬಳ ಆರಂಭವಾಗಲಿದೆ.

ಗಣ್ಯರ ಭೇಟಿ

ನ.25ರಂದು ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಕಂಬಳಕ್ಕೆ ಆಗಮಿಸಲಿದ್ದಾರೆ. ರಾಜಮನೆನತದ ರಾಣಿ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸೇರಿದಂತೆ ಸಚಿವರುಗಳು ಕಂಬಳದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬಾಲಿವುಡ್ ನಟಿ ಅನುಷ್ಕಾ ಶೆಟ್ಟಿ, ದೀಪಿಕಾ ಪಡುಕೋಣೆ, ಕ್ರಿಕೆಟಿಗ ಕೆ ಎಲ್ ರಾಹುಲ್, ಐಶ್ವರ್ಯಾ ರೈ, ತಮಿಳು ಚಿತ್ರ ನಟ ರಜನಿಕಾಂತ್ ಹಾಗೂ ಕನ್ನಡದ ಪ್ರಖ್ಯಾತ ನಟ ನಟಿಯರು ಹಾಗೂ 224 ಶಾಸಕರೂ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Previous Post

ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ : ಆರೋಪಿ 14 ದಿನ ಪೊಲೀಸ್ ಕಸ್ಟಡಿಗೆ..!

Next Post

(ಡಿ.17) ಪ್ರಗತಿ ವೈಭವ : ತಾಲೂಕು ಮಟ್ಟದ ಪ್ರೌಢಶಾಲಾ/ ಹಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಸ್ಪರ್ಧೆ

OtherNews

ಪುತ್ತೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಆಸ್ಪತ್ರೆಯ ಲೋಗೋ ಹಾಗೂ ಟ್ಯಾಗ್ ಲೈನ್ ( ಧ್ಯೇಯ ವಾಕ್ಯ) ವಿನ್ಯಾಸ ಸ್ಪರ್ಧೆ
ಪುತ್ತೂರು

ಪುತ್ತೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಆಸ್ಪತ್ರೆಯ ಲೋಗೋ ಹಾಗೂ ಟ್ಯಾಗ್ ಲೈನ್ ( ಧ್ಯೇಯ ವಾಕ್ಯ) ವಿನ್ಯಾಸ ಸ್ಪರ್ಧೆ

June 11, 2026
ಪುತ್ತೂರು: ಬನ್ನೂರು ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಸೂರಜ್ ನಿಧನ..!!
ನಿಧನ

ಪುತ್ತೂರು: ಬನ್ನೂರು ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಸೂರಜ್ ನಿಧನ..!!

June 11, 2026
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ತೃತೀಯ ವರ್ಷದ ಸಾರ್ವಜನಿಕ ವರಮಹಾಲಕ್ಷ್ಮಿ ಪೂಜೆ ; ಪದಾಧಿಕಾರಿಗಳ ಆಯ್ಕೆ.!!
ಧಾರ್ಮಿಕ

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ತೃತೀಯ ವರ್ಷದ ಸಾರ್ವಜನಿಕ ವರಮಹಾಲಕ್ಷ್ಮಿ ಪೂಜೆ ; ಪದಾಧಿಕಾರಿಗಳ ಆಯ್ಕೆ.!!

June 11, 2026
ಪುತ್ತೂರು : ರಸಿಕಾ ಕಂಬ್ಳೆ ನಿಧನ..!!
ನಿಧನ

ಪುತ್ತೂರು : ರಸಿಕಾ ಕಂಬ್ಳೆ ನಿಧನ..!!

June 11, 2026
ಪುತ್ತೂರು ಇಂಟರ್‌ನೆಟ್ ಕೇಬಲ್ ಅಳವಡಿಸುವ ವೇಳೆ ವಿದ್ಯುತ್ ಸ್ಪರ್ಶಗೊಂಡು ಪದ್ಮನಾಭ ಮೃತ್ಯು
ಕ್ರೈಮ್

ಉಪ್ಪಿನಂಗಡಿ: ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ..!!

June 11, 2026
ಪುತ್ತೂರು: ವಿಚಾರಣೆಗೆ ಗೈರಾಗಿದ್ದ ಪೋಕ್ಸೋ ಪ್ರಕರಣದ ಆರೋಪಿ ಬಂಧನ..!!
Featured

ಪುತ್ತೂರು: ವಿಚಾರಣೆಗೆ ಗೈರಾಗಿದ್ದ ಪೋಕ್ಸೋ ಪ್ರಕರಣದ ಆರೋಪಿ ಬಂಧನ..!!

June 10, 2026

Leave a Reply Cancel reply

Your email address will not be published. Required fields are marked *

Recent News

ಪುತ್ತೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಆಸ್ಪತ್ರೆಯ ಲೋಗೋ ಹಾಗೂ ಟ್ಯಾಗ್ ಲೈನ್ ( ಧ್ಯೇಯ ವಾಕ್ಯ) ವಿನ್ಯಾಸ ಸ್ಪರ್ಧೆ

ಪುತ್ತೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಆಸ್ಪತ್ರೆಯ ಲೋಗೋ ಹಾಗೂ ಟ್ಯಾಗ್ ಲೈನ್ ( ಧ್ಯೇಯ ವಾಕ್ಯ) ವಿನ್ಯಾಸ ಸ್ಪರ್ಧೆ

June 11, 2026
ಉಡುಪಿಯಲ್ಲಿ ತೆಂಗಿನಕಾಯಿ ಬಿದ್ದು ಹಸುಗೂಸು ಸಾವು..!!

ಉಡುಪಿಯಲ್ಲಿ ತೆಂಗಿನಕಾಯಿ ಬಿದ್ದು ಹಸುಗೂಸು ಸಾವು..!!

June 11, 2026
40 ಅಡಿ ಕಂದಕಕ್ಕೆ ಉರುಳಿದ ಕಾರು : ಚಾಲಕ ಪಾರು..!!

40 ಅಡಿ ಕಂದಕಕ್ಕೆ ಉರುಳಿದ ಕಾರು : ಚಾಲಕ ಪಾರು..!!

June 11, 2026
ಪುತ್ತೂರು: ಬನ್ನೂರು ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಸೂರಜ್ ನಿಧನ..!!

ಪುತ್ತೂರು: ಬನ್ನೂರು ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಸೂರಜ್ ನಿಧನ..!!

June 11, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2020 Zoomin TV. All Rights Reserved. Website made with ❤️ by The Web People.